Advertisement

ಮಂಗಳೂರು: ರಥಬೀದಿ ಶ್ರೀ ವೀರವೆಂಕಟೇಶ ದೇವರಿಗೆ ಅಮಿತಾಭ್‌ ನಮನ

01:34 AM Jun 18, 2022 | Team Udayavani |

ಮಂಗಳೂರು: ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ವೀರವೆಂಕಟೇಶ ದೇವರಿಗೆ ಬಾಲಿವುಡ್‌ನ‌ ಮೇರುನಟ ಅಮಿತಾಭ್‌ ಬಚ್ಚನ್‌ ಅವರು ಟ್ವಿಟರ್‌ನಲ್ಲಿ ಭಕ್ತಿ ನಮನ ಸಲ್ಲಿಸಿದ್ದಾರೆ.

Advertisement

ಅಮಿತಾಭ್‌ ಅವರು ಶ್ರೀ ವೀರವೆಂಕಟೇಶ ದೇವ ರ ಮೂರ್ತಿಯ ಫೋಟೋವನ್ನು ಶುಕ್ರವಾರ ಟ್ವಿಟರ್‌ನಲ್ಲಿ ಹಾಕಿದ್ದಾರೆ. ಅದರ ಮೇಲುಗಡೆ ದೇವರ ಅಂಗಳದಲ್ಲಿ, ದ್ವಾರದ ಸಾಮೀಪ್ಯದಲ್ಲಿ, ಅವರ ಮಂಟಪದಲ್ಲಿ ಚರಣಸ್ಪರ್ಶ ಮಾಡುತ್ತೇನೆ ಸದಾ … (ಈಶ್ವರ್‌ಕೆ ಅಂಗಾನ್‌ ಮೇ, ನಿಕಟ್‌ ಉನ್‌ಕೆ ದ್ವಾರ್‌ ಪೆ, ಚರಣ್‌ಸ್ಪರ್ಶ್‌ ಕರತ್‌ ಹೈ ಸದಾ ಉನ್‌ಕೆ ಮಂಡಪ್‌ ಪೆ) ಎಂದು ಭಕ್ತಿಪೂರ್ವಕ ಸಾಲುಗಳನ್ನು ಬರೆದಿದ್ದಾರೆ.

ಇದೇ ರೀತಿ ಮೇ 27ರಂದು ನಗರದ ಕೊಂಚಾಡಿಯ ಶ್ರೀ ಮಹಾಲಸಾ ನಾರಾಯಣಿ ಕ್ಷೇತ್ರದ ಶ್ರೀ ಮಹಾಲಸಾ ನಾರಾಯಣಿ ದೇವರ ಮೂರ್ತಿಯ ಫೋಟೋವನ್ನು ಹಾಕಿ ಅಮಿತಾಭ್‌ ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next