Advertisement

ಅಮಿತಾಭ್‌ಗೆ ನೋಟಿಸ್‌ 

08:05 AM Nov 03, 2018 | Karthik A |

ಹೊಸದಿಲ್ಲಿ: ಭಾರತದ ಮಸಾಲಾ ಪುಡಿ ತಯಾರಿಕಾ ಕಂಪನಿಯೊಂದರ ಜಾಹೀರಾತೊಂದರಲ್ಲಿ ವಕೀಲರ ದಿರಿಸಿನಲ್ಲಿ ಕಾಣಿಸಿಕೊಂಡಿರುವ ನಟ ಅಮಿತಾಭ್‌ ಬಚ್ಚನ್‌ ವಿರುದ್ಧ ದಿಲ್ಲಿಯ ಬಾರ್‌ ಕೌನ್ಸಿಲ್‌ ನೋಟಿಸ್‌ ಜಾರಿಗೊಳಿಸಿದೆ. ವಕೀಲರ ಪಾತ್ರವನ್ನು ರೂಪಿಸುವ ವಿಚಾರದಲ್ಲಿ ಜಾಹೀರಾತಿಗೆ ಸಂಬಂಧಪಟ್ಟವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಆರೋಪಿಸಿರುವ ಕೌನ್ಸಿಲ್‌, ತಕ್ಷಣದಿಂದಲೇ ಈ ಜಾಹೀರಾತಿನ ಪ್ರಸಾರ ನಿಲ್ಲಿಸಬೇಕು ಹಾಗೂ ಇನ್ನು ಮುಂದೆ ವಕೀಲರ ದಿರಿಸನ್ನು ಉಪಯೋಗಿಸುವುದಿಲ್ಲ ಎಂದು ದಿಲ್ಲಿ  ಬಾರ್‌ ಕೌನ್ಸಿಲ್‌, ಭಾರತೀಯ ಬಾರ್‌ ಕೌನ್ಸಿಲ್‌ ಹಾಗೂ ಎಲ್ಲಾ ರಾಜ್ಯಗಳ ಬಾರ್‌ ಕೌನ್ಸಿಲ್‌ಗ‌ಳಿಗೆ 10 ದಿನಗಳೊಳಗೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಸೂಚಿಸಿದೆ. ಜಾಹೀರಾತು ಪ್ರಸಾರ ಮಾಡಿರುವ ಮಾಧ್ಯಮಗಳಿಗೂ, ಯುಟ್ಯೂಬ್‌ಗೂ ನೋಟಿಸ್‌ ಜಾರಿಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next