Advertisement

ಪ್ರತಿರೋಧ: ಪ್ರಣವ್‌ ಮೆಚ್ಚುಗೆ

10:08 AM Jan 25, 2020 | Hari Prasad |

ಹೊಸದಿಲ್ಲಿ: ದೇಶಾದ್ಯಂತ ಪ್ರಸ್ತುತ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳ ಅಲೆಯು ಭಾರತದ ಪ್ರಜಾಸತ್ತೆಯ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಚುನಾವಣಾ ಆಯೋಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚರ್ಚಿಸುವುದು, ಆಲಿಸುವುದು ಮತ್ತು ಪ್ರತಿರೋಧಿಸುವುದರಲ್ಲೇ ಪ್ರಜಾಪ್ರಭುತ್ವದ ಯಶಸ್ಸು ಅಡಗಿದೆ. ಇತ್ತೀಚೆಗೆ ಯುವಜನರೂ ಬೀದಿಗಿಳಿಯುತ್ತಿದ್ದಾರೆ. ಅವರಿಗೆ ಸಂವಿಧಾನದ ಮೇಲಿರುವ ನಂಬಿಕೆಯನ್ನು ನೋಡಿದರೆ, ಹೃದಯ ತುಂಬಿ ಬರುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next