Advertisement

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

10:42 PM Oct 19, 2021 | Team Udayavani |

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಖ್ಯಾತ ನಾಯಕ ಮಿಲಿಂದ್‌ ದೇವೊರಾ ಬಿಜೆಪಿಯ ಮಹತ್ವಾಕಾಂಕ್ಷಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಪರವಾಗಿ ಮಾತನಾಡಿದ್ದಾರೆ.

Advertisement

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ತೀವ್ರ ದಾಳಿಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ತೊಂದರೆಗೊಳಗಾಗಿರುವ ಹಿಂದುಗಳನ್ನು ರಕ್ಷಿಸಲು, ಓಡಿ ಬಂದವರಿಗೆ ಪುನರ್ವಸತಿ ಕಲ್ಪಿಸಲು ಸಿಎಎಯನ್ನು ತಿದ್ದುಪಡಿ ಮಾಡಲೇಬೇಕು ಎಂದಿದ್ದಾರೆ.

ಇದೇ ವೇಳೆ ಭಾರತೀಯ ಮುಸ್ಲಿಮರನ್ನು ಬಾಂಗ್ಲಾದ ತೀವ್ರವಾದಿ ಮುಸ್ಲಿಮರೊಂದಿಗೆ ಹೋಲಿಸಿ, ಭಾರತದಲ್ಲಿ ದಾಳಿ ಮಾಡಬಾರದು. ಅಂತಹ ಅಪಾಯವನ್ನು ತಪ್ಪಿಸಲು ಸಿದ್ಧರಿರಬೇಕು ಎಂದೂ ಆಗ್ರಹಿಸಿದ್ದಾರೆ.

ಪೌರತ್ವ ಕಾಯ್ದೆಗೆ ಕೇಂದ್ರದ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿ ಅದನ್ನು ಸಿಎಎ ಎಂದು ಬದಲಿಸಿದೆ. ಇದರ ಪ್ರಕಾರ ಭಾರತಕ್ಕೆ ವಲಸೆ ಬಂದಿರುವ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದುಗಳು, ಬೌದ್ಧರು, ಜೈನರು, ಸಿಖ್ಖರು, ಕ್ರೈಸ್ತರಿಗೆ ಪೌರತ್ವ ನೀಡಲು ಸಾಧ್ಯವಿದೆ. ಇದನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದೆ. ಈ ಹಿನ್ನೆಲೆಯಲ್ಲಿ ದೆವೊರಾ ಹೇಳಿಕೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next