Advertisement

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

12:42 PM Jul 02, 2024 | Team Udayavani |

ಕುಣಿಗಲ್:  ಮಂಗಳೂರಿಗೆ ಶವ ಸಾಗಿಸಿ ಬೆಂಗಳೂರಿಗೆ  ವಾಪಸ್ಸ್  ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್  ಪಲ್ಟಿಯಾಗಿ, ಚಾಲಕ  ಸ್ಥಳದಲ್ಲೇ ಮೃತಪಟ್ಟಿರುವ  ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಎಡಿಯೂರು ಹೋಬಳಿ ಅಗ್ರಹಾರ ಗೇಟ್ ಬಳಿ ಮಂಗಳವಾರ(ಜು.2 ರಂದು) ಬೆಳಗ್ಗೆ  ಸಂಭವಿಸಿದೆ.

Advertisement

ಬೆಂಗಳೂರು ಮೂಲದ ಶ್ರೀಕಾಂತ್ ( 26) ಮೃತ ಚಾಲಕ.

ಶ್ರೀಕಾಂತ್ ಹಾಗೂ ವೆಂಕಟೇಶ್ ಇಬ್ಬರು ಚಾಲಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಮೃತ ಶವವನ್ನು ಮಂಗಳೂರಿಗೆ ರವಾನಿಸಿ, ವಾಪಸ್ಸ್ ಬೆಂಗಳೂರಿಗೆ ಬರಬೇಕಾದರೇ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿಯಾದ ಪರಿಣಾಮ ಚಾಲಕ ಶ್ರೀಕಾಂತ್ ಕಿಟಕಿಯಿಂದ ಹೊರಬಿದ್ದು, ಕಿಟಕಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಮೃತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next