Advertisement

ಉಪ್ಪುಂದ; ಕಾರಿಗೆ ಆಂಬುಲೆನ್ಸ್ ಢಿಕ್ಕಿ

09:35 PM Oct 19, 2022 | Team Udayavani |

ಉಪ್ಪುಂದ: ಭಟ್ಕಳದಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಆಂಬುಲೆನ್ಸ್ ಕಾರಿಗೆ ಢಿಕ್ಕಿ ಹೊಡೆದ ಘಟನೆ ಉಪ್ಪುಂದ ಶಾಲೆಬಾಗಿಲು ರಾ.ಹೆ.66ರಲ್ಲಿ ಸಂಭವಿಸಿದೆ.

Advertisement

ಆಸ್ಪತ್ರೆ ಭಟ್ಕಳ ವೈದ್ಯಾಧಿಕಾರಿ ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಭಟ್ಕಳದ ನಗು ಮಗು ಅಂಬ್ಯುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗುವಂತೆ ಚಾಲಕನಲ್ಲಿ ತಿಳಿಸಿದ್ದು ಅಂಬುಲೆನ್ಸ್ ಉಪ್ಪುಂದ ಗ್ರಾಮದ ಶಾಲೆಬಾಗಿಲು ಹತ್ತಿರ ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ವಿಫ್ಟ್ ಕಾರು ಚಾಲಕ ಕಾರನ್ನು ಮಧ್ಯ ರಸ್ತೆಯಲ್ಲಿ ಸಡನ್‌ ಆಗಿ ಬ್ರೇಕ್‌ ಹಾಕಿ ನಿಲ್ಲಿಸಿದ್ದು, ಅಂಬ್ಯುಲೆನ್ಸ್ ಕಾರಿನ ಹಿಂಬದಿಗೆ ಹೋಗಿ ಢಿಕ್ಕಿ ಹೊಡೆದಿದೆ. ಅಂಬ್ಯುಲೆನ್ಸ್ ಜಖಂ ಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next