Advertisement

ತಿರುವನಂತಪುರಂ: ಆ್ಯಂಬುಲೆನ್ಸ್‌ ಬಾಗಿಲು ಜಾಮ್‌; ವ್ಯಕ್ತಿ ಸಾವು

08:39 PM Aug 30, 2022 | Team Udayavani |

ತಿರುವನಂತಪುರಂ: ಅಪಘಾತದಿಂದ ಗಾಯಾಳುವಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದ ಆ್ಯಂಬುಲೆನ್ಸ್‌ನ ಬಾಗಿಲು ಜಾಮ್‌ ಆಗಿ, ಆತ ಆ್ಯಂಬುಲೆನ್ಸ್‌ನಲ್ಲೇ ಸಾವನ್ನಪ್ಪಿರುವ ಘಟನೆ ಕೇರಳದ ಕಲ್ಲಿಕೋಟೆಯಲ್ಲಿ ನಡೆದಿದೆ.

Advertisement

ಫೆರೋಕೆ ನಗರದ ಕೊಯಮೊನ್‌(66) ಹೆಸರಿನ ವ್ಯಕ್ತಿ ಸೋಮವಾರ ಮಧ್ಯಾಹ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ಆತನಿಗೆ ಅಪಘಾತವಾಗಿದೆ. ಸ್ಥಳೀಯರು ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಆ್ಯಂಬುಲೆನ್ಸ್‌ ಗಾಯಾಳುವನ್ನು ಕಲ್ಲಿಕೋಟೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದೆ.

ಆದರೆ ಆಸ್ಪತ್ರೆಯ ಬಳಿ ಆ್ಯಂಬುಲೆನ್ಸ್‌ನ ಬಾಗಿಲು ಜಾಮ್‌ ಆಗಿದ್ದರಿಂದಾಗಿ ಸುಮಾರು ಅರ್ಧ ಗಂಟೆ ಕಾಲ ಬಾಗಿಲು ತೆರೆಯಲಾಗಿಲ್ಲ. ನಂತರ ಸ್ಥಳೀಯರು ಆ್ಯಂಬುಲೆನ್ಸ್‌ ಕಿಟಕಿ ಒಡೆದು, ಬಾಗಿಲು ತೆರೆದಿದ್ದಾರೆ. ಚಿಕಿತ್ಸೆ ಸಿಗುವಲ್ಲಿ ತಡವಾದ ಹಿನ್ನೆಲೆ ಕೊಯಮೊನ್‌ ಪ್ರಾಣ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next