Advertisement

ದೀನ-ದಲಿತರಿಗೆ ಬೆಳಕಾದ ಅಂಬೇಡ್ಕರ್‌

03:54 PM Apr 21, 2019 | Team Udayavani |

ಹಾವೇರಿ: ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಡಾ| ಬಿ.ಆರ್‌. ಅಂಬೇಡ್ಕರ್‌ರವರ 128ನೇ ಜಯಂತಿ ನಗರದ ಸುಭಾಷ ಸರ್ಕಲ್ನಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಆಚರಿಸಲಾಯಿತು.

Advertisement

ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಶಂಭು ಕಳಸದ ಮಾತನಾಡಿ, ಡಾ| ಬಿ.ಆರ್‌. ಅಂಬೇಡ್ಕರ್‌ ದೀನ-ದಲಿತರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರ ಬಾಳಿಗೆ ಬೆಳಕು ನೀಡಿದ್ದಾರೆ. ಮತ್ತು 18ವರ್ಷ ಆದ ದೇಶದ ಎಲ್ಲ ವರ್ಗದ ಜನರಿಗೂ ಮತದಾನ ಹಕ್ಕು ನೀಡಿದ್ದಾರೆ. ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು.

ಎಂ.ಬಿ. ಕಾಳೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕನವಳ್ಳಿ, ಉಪಾಧ್ಯಕ್ಷ ಸುರೇಶ ಛಲವಾದಿ, ತಮ್ಮಣ್ಣ ಕಾಳಿ, ಖಜಾಂಚಿ ಸತೀಶ ಕಾಟೇನಹಳ್ಳಿ, ಶಂಕ್ರಣ್ಣ ಲಕ್ಮಣ್ಣನವರ, ಮಂಜುನಾಥ ಮಿಲಗನರ, ಮಲ್ಲೇಶಣ್ಣ ದಂಡೆಮ್ಮನವರ, ಹೊನ್ನಪ್ಪ ಹರಿಜನ, ಅಶೋಕ ಮರೆಣ್ಣನವರ, ರಮೇಶ ಕಡೇರ, ನವೀನ ಛಲವಾದಿ, ಪ್ರಮೋದ ಕಳಸದ, ಶಕ್ತಿ ಕ್ಯಾತಣ್ಣನವರ, ಶಿವಕುಮಾರ ಛಲವಾದಿ, ಮಂಜು ಕಾಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next