Advertisement

ವಾಹನಕ್ಕೆ ಬಡಿದ ಕಲ್ಲು: ಅಮರನಾಥ ಯಾತ್ರಿಗೆ ಗಾಯ, ಆಸ್ಪತ್ರೆಗೆ ದಾಖಲು

10:37 AM Jul 10, 2019 | Team Udayavani |

ಜಮ್ಮು : ರಸ್ತೆಗೆ ಉರುಳಿ ಬಂದ ಬಂಡೆಯೊಂದು ವಾಹನಕ್ಕೆ ಢಿಕ್ಕಿಯಾದ ಕಾರಣ ಆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಮರನಾಥ ಯಾತ್ರಿಯೊಬ್ಬರು ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ರಾಮಬನ್‌ ಜಿಲ್ಲೆಯಿಂದ ವರದಿಯಾಗಿದೆ.

Advertisement

ಪಹಲ್‌ಗಾಂವ್‌ ಮತ್ತು ಬಲ್ತಾಲ್‌ ಮೂಲ ಶಿಬಿರಗಳತ್ತ ಯಾತ್ರಿಕರ ವಾಹನಗಳು ಸಾಲು ಸರತಿಯಲ್ಲಿ ಸಾಗುತ್ತಿದ್ದಾಗ ಈ ದುರ್ಘ‌ಟನೆ ನಡೆಯಿತು. ಟವೇರಾ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಗೆ ಗಾಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಯಾತ್ರಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next