Advertisement

ಸುಳ್ವಾಡಿ ದುರಂತ: ಆಳ್ವಾಸ್‌ನಲ್ಲಿ ದತ್ತು ಶಿಕ್ಷಣಕ್ಕೆ ಒಪ್ಪಿದ ಮಕ್ಕಳು

09:52 AM Dec 19, 2018 | Team Udayavani |

ಮೂಡುಬಿದಿರೆ: ವಿಷ ಬೆರೆತ ಪ್ರಸಾದ ಸೇವನೆಯಿಂದ ಮೃತಪಟ್ಟ  ಮೈಸೂರು ಸುಳ್ವಾಡಿಯ ಕೃಷ್ಣ ನಾಯ್ಕ-ಮೈಲಿಬಾಯಿ ದಂಪತಿಯ  ಮೂವರು ಮಕ್ಕಳಿಗೆ ವಸತಿ, ಊಟೋಪಹಾರ ಸಹಿತ ಸಂಪೂರ್ಣ ಉಚಿತ ದತ್ತು ಶಿಕ್ಷಣ ನೀಡಲು ಮುಂದಾದ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮಾನವೀಯ ಕೊಡುಗೆಯನ್ನು  ಮಕ್ಕಳು ಒಪ್ಪಿದ್ದಾರೆ.

Advertisement

ಸುಳ್ವಾಡಿಯ ಕೃಷ್ಣ ನಾಯ್ಕ ಮನೆಗೆ ಮಂಗಳವಾರ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಪರವಾಗಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್‌, ಆಳ್ವಾಸ್‌ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ| ಯತಿಕುಮಾರ ಸ್ವಾಮಿ ಗೌಡ, ಕಾಮರ್ಸ್‌ ಡೀನ್‌ ಪ್ರಶಾಂತ್‌ ಹಾಗೂ ಉಪನ್ಯಾಸಕ ಅಂಬರೀಷ್‌ ಅವರ ನಿಯೋಗ ಭೇಟಿ ಮಾಡಿ ಮೂವರು ಮಕ್ಕಳು ಅವರ ಸಂಬಂಧಿಕರಿಗೆ ಸಾಂತ್ವನ ಹೇಳುವುದರ ಜತೆಗೆ ಒಂದು ಲಕ್ಷ ರೂ. ಆರ್ಥಿಕ ನೆರವು ಹಸ್ತಾಂತರಿಸಿದೆ.

ಹಿರಿಯ ಪುತ್ರಿ ರಾಣಿಬಾಯಿ ಅವರ ಬಿಎಸ್‌ಸಿ, ಎರಡನೇ ಮಗಳು ಪ್ರಿಯಾಬಾಯಿ ಅವರ ಬಿಎಸ್‌ಸಿ ನರ್ಸಿಂಗ್‌ ವ್ಯಾಸಂಗ ಹಾಗೂ ಪುತ್ರ ರಾಜೇಶ್‌ ನಾಯ್ಕನ ಪಿಯುಸಿ ವ್ಯಾಸಂಗವನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಲ್ಲಿ ಮುಂದುವರಿಸಲಿದ್ದಾರೆ. ಹೆತ್ತವರ ಉತ್ತರಕ್ರಿಯೆ ಬಳಿಕ ಮೂವರೂ ಆಳ್ವಾಸ್‌ ಶಿಕ್ಷಣಾಲಯವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next