Advertisement

Alnavar: ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

08:51 PM Oct 04, 2024 | Team Udayavani |

ಅಳ್ನಾವರ: ಸಾಲು ಮರದ ತಮ್ಮಕ್ಕ ಉದ್ಯಾನವನದ ಹಿಂಬಾಗದಲ್ಲಿನ ಡೌಗಿ ನಾಲಾ ಹಳ್ಳದಲ್ಲಿ ಯುವಕನೊಬ್ಬ ಈಜು ಬಾರದೆ ಶುಕ್ರವಾರ (ಅ.04) ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಬೆಳಗಿನ ಜಾವ ಸ್ನಾನಕ್ಕೆ ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಈಜಲು ಬಾರದೆ ದಡ ಸೇರಲು ಸೆಣಸಾಡಿ ಮರಣ ಹೊಂದಿದ ಘಟನೆ ನಡೆದಿದೆ.
ಆತನನ್ನು ಅಮೃತ ನಗರ ನಿವಾಸಿ ಪವನ ಶೇಖಪ್ಪ ಬಂಡಿವಡ್ಡರ ( 16 ) ಎಂದು ಗುರ್ತಿಸಲಾಗಿದೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next