Advertisement

Allu Arjun: ವಿಶೇಷ ಅಭಿಮಾನಿಯೊಂದಿಗೆ ಆತ್ಮೀಯ ಕ್ಷಣವನ್ನು ಕಳೆದ ʼಬನ್ನಿʼ; ಫೋಟೋ ವೈರಲ್

10:22 AM Oct 17, 2023 | Team Udayavani |

ಹೈದರಾಬಾದ್:  ಸ್ಟೈಲಿಸ್ಟ್‌ ಅಲ್ಲು ಅರ್ಜುನ್‌ ʼಪುಷ್ಪʼದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಗೌರವ ಪಡೆದುಕೊಂಡಿದ್ದು, ಪ್ರಶಸ್ತಿ ಸ್ವೀಕರಿಸಲು ತನ್ನ ಪತ್ನಿಯೊಂದಿಗೆ  ದೆಹಲಿಗೆ ತಲುಪಿದ್ದಾರೆ. ಈ ವೇಳೆ ‘ಬನ್ನಿ’ ಸ್ಪೆಷೆಲ್‌ ಫ್ಯಾನ್ ಯೊಬ್ಬರನ್ನು ಭೇಟಿ ಆಗಿದ್ದಾರೆ.

Advertisement

ಅಲ್ಲು ಅರ್ಜುನ್‌ ಅವರಿಗೆ ಗ್ಲೋಬಲ್‌ ಮಟ್ಟದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅಲ್ಲು ಅಭಿಮಾನಿಗಳಿಗೆ  ಗೌರವ ನೀಡುತ್ತಾರೆ. ಇತ್ತೀಚೆಗೆ ಅವರು ತನ್ನ ಪುಟ್ಟ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಆಗಿರುವ ಕ್ಷಣ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಾಷ್ಟ್ರ ಪ್ರಶಸ್ತಿ ಸಮಾರಂಭಕ್ಕಾಗಿ ದೆಹಲಿ ತಲುಪುವ ವೇಳೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಬಾಲಕನನ್ನು ಭೇಟಿ ಆಗಿದ್ದಾರೆ. ಬಾಲಕನನ್ನು ಭೇಟಿಯಾಗಿ  ಆಟೋಗ್ರಾಫ್‌ ಕೊಟ್ಟು ಹಾಗೂ ಫೋಟೋ ತೆಗೆದು ಒಂದಷ್ಟು ಕ್ಷಣವನ್ನು ಕಳೆದು ಅಭಿಮಾನಿಯನ್ನು ಖುಷಿಯಾಗಿಸಿದ್ದಾರೆ. ʼಪುಷ್ಪʼ ನಟನ ಈ ಆತ್ಮೀಯತೆಗೆ ಅನೇಕರು ಶ್ಲಾಘಿಸಿದ್ದಾರೆ.

ʼಪುಷ್ಪ-2ʼ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್‌,  ಬಳಿಕ ತ್ರಿವಿಕ್ರಮ್‌ ಶ್ರೀನಿವಾಸ್‌ , ವೇಣು ಶ್ರೀರಾಮ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next