Advertisement

ಸಿದ್ದು ಸಚಿವರಿಗೆ ಖಾತೆ ಹಂಚಿಕೆ: ಪರಂಗೆ ಗೃಹ, ಜಾರ್ಜ್ ಗೆ ಇಂಧನ… ಇಲ್ಲಿದೆ ಪೂರ್ಣ ಪಟ್ಟಿ

03:47 PM May 27, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಸಿಎಂ, ಡಿಸಿಎಂ ಸೇರಿ ಒಟ್ಟು 34 ಮಂದಿ ಸಚಿವರು ಈ ಸಂಪುಟದಲ್ಲಿದ್ದಾರೆ.

Advertisement

ನಿರೀಕ್ಷೆಯಂತೆಯೇ ಸಿದ್ದರಾಮಯ್ಯ ಅವರು ಹಣಕಾಸು ಖಾತೆ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಬೃಹತ್ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರ ಅಭಿವೃದ್ಧಿ ಖಾತೆ ಪಡೆದುಕೊಂಡಿದ್ದಾರೆ.

ಸಿದ್ದರಾಮಯ್ಯ: ಹಣಕಾಸು, ಗುಪ್ತಚರ

ಡಿಕೆ ಶಿವಕುಮಾರ್: ಜಲ ಸಂಪನ್ಮೂಲ, ಬೆಂಗಳೂರು ನಗರ ಅಭಿವೃದ್ಧಿ.

ಡಾ.ಜಿ ಪರಮೇಶ್ವರ: ಗೃಹ

Advertisement

ಎಚ್.ಕೆ ಪಾಟೀಲ್: ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ, ಸಣ್ಣ ನೀರಾವರಿ.

ಕೆ.ಎಚ್ ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು

ಕೆ.ಜೆ ಜಾರ್ಜ್: ಇಂಧನ

ಎಂ.ಬಿ ಪಾಟೀಲ್; ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ ಬಿಟಿ ಖಾತೆ

ರಾಮಲಿಂಗ ರೆಡ್ಡಿ: ಸಾರಿಗೆ

ಸತೀಶ್ ಜಾರಕಿಹೊಳಿ: ಲೋಕೋಪಯೋಗಿ

ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಜಮೀರ್ ಅಹಮದ್: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ

ಕೃಷ್ಣ ಬೈರೇಗೌಡ: ಕಂದಾಯ

ದಿನೇಶ್ ಗುಂಡೂರಾವ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಚಲುವರಾಯಸ್ವಾಮಿ: ಕೃಷಿ

ಕೆ.ವೆಂಕಟೇಶ್: ಪಶುಸಂಗೋಪನೆ ಮತ್ತು ರೇಷ್ಮೆ

ಎಚ್ ಸಿ ಮಹದೇವಪ್ಪ: ಸಮಾಜ ಕಲ್ಯಾಣ

ಈಶ್ವರ್ ಖಂಡ್ರೆ: ಅರಣ್ಯ, ಪರಿಸರ ವಿಜ್ಞಾನ

ಕೆ ಎನ್ ರಾಜಣ್ಣ: ಸಹಕಾರ

ಶರಣಬಸಪ್ಪ ದರ್ಶನಾಪುರ: ಸಣ್ಣ ಕೈಗಾರಿಕೆ

ಶಿವಾನಂದ ಪಾಟೀಲ್: ಜವಳಿ, ಸಕ್ಕರೆ

ಆರ್.ಬಿ ತಿಮ್ಮಾಪುರ: ಅಬಕಾರಿ ಮತ್ತು ಮುಜರಾಯಿ

ಎಸ್.ಎಸ್. ಮಲ್ಲಿಕಾರ್ಜುನ: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ

ಶಿವರಾಜ ತಂಗಡಗಿ: ಹಿಂದುಳಿದ ವರ್ಗ ಮತ್ತು ಎಸ್.ಟಿ ಕಲ್ಯಾಣ

ಶರಣ ಪ್ರಕಾಶ ಪಾಟೀಲ: ಉನ್ನತ ಶಿಕ್ಷಣ

ಮಾಂಕಾಳ್ ವೈದ್ಯ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ

ಲಕ್ಷ್ಮೀ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ.

ರಹೀಂ ಖಾನ್: ಪೌರಾಡಳಿತ, ಹಜ್

ಡಿ ಸುಧಾಕರ್: ಮೂಲಸೌಕರ್ಯ ಅಭಿವೃದ್ಧಿ

ಸಂತೋಶ್ ಲಾಡ್: ಕಾರ್ಮಿಕ

ಎನ್.ಎಸ್.ಬೋಸರಾಜು: ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ

ಬೈರತಿ ಸುರೇಶ್: ನಗರಾಭಿವೃದ್ದಿ

ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಎಂ.ಸಿ ಸುಧಾಕರ್: ವೈದ್ಯಕೀಯ ಶಿಕ್ಷಣ

ಬಿ.ನಾಗೇಂದ್ರ: ಕ್ರೀಡಾ, ಯವಜನ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next