Advertisement

ಕಾಂಗ್ರೆಸ್‌ ಜತೆ ಮೈತ್ರಿ: ಎಚ್‌ಡಿಡಿ-ಎಚ್‌ಡಿಕೆ ಭಿನ್ನರಾಗ

05:35 PM Aug 05, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಜತೆ ಚುನಾ ವಣೋತ್ತರ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚನೆ, ಚುನಾವಣಪೂರ್ವ ಮೈತ್ರಿಯಡಿ ಲೋಕಸಭೆ ಚುನಾವಣೆ ಎದುರಿಸಿ “ಹೈರಾಣ’ ಆಗಿರುವ ಜೆಡಿಎಸ್‌ನಲ್ಲಿ ಈಗ ಉಪ ಚುನಾವಣೆಗೆ ಮೈತ್ರಿ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರದ್ದು “ಭಿನ್ನರಾಗ’ಎಂಬಂತಾಗಿದೆ.

Advertisement

ಹದಿನಾಲ್ಕು ತಿಂಗಳು ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿ ಕಾಂಗ್ರೆಸ್‌ ನಾಯಕರ ಒಳ ಹಾಗೂ ಹೊರ “ಆಟ’ದ ಅನುಭವದ ಆಧಾರದ ಮೇಲೆ ಕುಮಾರಸ್ವಾಮಿ ಮೈತ್ರಿ ಸಹವಾಸ ಸಾಕು ಎಂಬ ತೀರ್ಮಾನಕ್ಕೆ ಬಂದು ಸ್ವಂತ ಶಕ್ತಿಯ ಮೇಲೆಯೇ ಉಪ ಚುನಾವಣೆ ಎದುರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಆದರೆ ರಾಷ್ಟ್ರ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಪರ್ಯಾಯವಾಗಿ ತೃತೀಯ ಶಕ್ತಿ ಕಟ್ಟುವ ಆಸೆ ಜೀವಂತವಾಗಿರಿಸಿಕೊಂಡಿರುವ ದೇವೇಗೌಡರು ಮೈತ್ರಿ ಮುಂದುವರಿಸುವ ಬಗ್ಗೆ ಒಲವು ಹೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷಗಿರಿ, ವಿಪಕ್ಷ ನಾಯಕ ಸ್ಥಾನ ಯಾರ ಪಾಲಾಗುತ್ತದೆ ಎಂಬುದು ನೋಡಿಕೊಂಡು ಕಾಂಗ್ರೆಸ್‌ ಹೈಕಮಾಂಡ್‌ ಜತೆ ಚರ್ಚಿಸಿ ಅನಂತರ ಸ್ನೇಹಪೂರ್ವಕವಾಗಿಯೇ ಸ್ವತಂತ್ರ ಸ್ಪರ್ಧೆ ಮಾಡಬಹುದು ಎಂಬುದು ಇನ್ನೊಂದು ಲೆಕ್ಕಾಚಾರ.

ಉಪ ಚುನಾವಣೆಯ 17 ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳು ಸಿಗು ವುದು ಕಷ್ಟ. ಕಾಂಗ್ರೆಸ್‌-ಜೆಡಿಎಸ್‌ ಪ್ರತ್ಯೇಕ ವಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಅನುಕೂಲ ವಾಗ ಬಹುದು. ಉಪ ಚುನಾವಣೆಯಲ್ಲಿ ಹತ್ತ ರಿಂದ ಹನ್ನೆರಡು ಸ್ಥಾನ ಬಿಜೆಪಿ ಗೆದ್ದರೆ ಸರಕಾರ ಗಟ್ಟಿಗೊಳ್ಳುತ್ತದೆ. ನಾವೇ ಶಕ್ತಿವರ್ಧನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬುದು ದೇವೇ ಗೌಡರ ಅಭಿಪ್ರಾಯವಾಗಿದೆ. ಹೀಗಾಗಿಯೇ ಹೈಕಮಾಂಡ್‌ ನಿಲುವಿನತ್ತ ಅವರು ಎದುರು ನೋಡು ತ್ತಿದ್ದಾರೆ ಎಂದು ವಿಶ್ವಸನೀಯ ಮೂಲ ಗಳು ತಿಳಿಸಿವೆ.

ಎಚ್‌ಡಿಕೆ ನಿರಾಸಕ್ತಿ
ಸಮ್ಮಿಶ್ರ ಸರಕಾರ ಪತನಕ್ಕೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ತುಮಕೂರು, ಮಂಡ್ಯ ಕ್ಷೇತ್ರ ದಲ್ಲಿ ಜೆಡಿಎಸ್‌ ಸೋಲಿಗೆ ಕಾಂಗ್ರೆಸ್‌ ನಾಯಕರೇ ಕಾರಣ ಎಂಬುದು ಗೊತ್ತಿದ್ದರೂ ಮತ್ತೆ ಕಾಂಗ್ರೆಸ್‌ ಜತೆಯೇ ಕೈಜೋಡಿಸಿಕೊಂಡು ಹೋಗುವುದು ಸೂಕ್ತವಲ್ಲ. ಏನಾದರೂ ಆಗಲಿ, ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನಮ್ಮ ಶಕ್ತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಕಟ್ಟುವುದೇ ಸೂಕ್ತ ಎಂಬ ವಾದ ಮುಂದಿಟ್ಟಿರುವ ಕುಮಾರಸ್ವಾಮಿಯವರು ಮೈತ್ರಿ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

Advertisement

ಜೆಡಿಎಸ್‌ನ ಬಹುತೇಕ ಶಾಸಕರಿಗೂ ಕಾಂಗ್ರೆಸ್‌ ಜತೆ ಮೈತ್ರಿ ಮುಂದುವರಿಸುವುದು ಇಷ್ಟವಿಲ್ಲ. ಬದಲಿಗೆ ಸ್ವಲ್ಪ ದಿನ ಕಾದು ನೋಡಿ ಉಪ ಚುನಾವಣೆ ಅನಂತರ ಬಿಜೆಪಿ ಜತೆ ಮರು ಮೈತ್ರಿ ಅಥವಾ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಬಹುದೆಂಬ ಅಭಿಪ್ರಾಯವಿದೆ.

ಆರು ಕಡೆ ಓಕೆ
ಮೇಲ್ನೋಟಕ್ಕೆ ಯಶವಂತಪುರ, ಹುಣ ಸೂರು, ಮಹಾಲಕ್ಷ್ಮೀ ಲೇಔಟ್‌, ರಾಜರಾಜೇಶ್ವರಿನಗರ, ಕೆ.ಆರ್‌. ಪೇಟೆ, ಚಿಕ್ಕಬಳ್ಳಾ ಪುರ ಕ್ಷೇತ್ರಗಳಲ್ಲಿ ಜೆಡಿಎಸ್‌ ಸಂಘ ಟನೆ ಹಾಗೂ ಸಮುದಾಯದ ವಿಚಾರ ದಲ್ಲಿ ಬಲವಾಗಿದೆ. ಇತರೆಡೆ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. ಹೀಗಾಗಿ ಜೆಡಿಎಸ್‌ ಸ್ವತಂತ್ರ ಸ್ಪರ್ಧೆಗೆ ಇಳಿ ದರೆ ಹನ್ನೊಂದು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿ ಗಳಿಗಾಗಿ ಹುಡುಕಾಟ ನಡೆಸಬೇಕಾಗಿದೆ.

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next