Advertisement

ನಾಗಾಸಾಧುಗಳಿಂದ ಬಿಎಸ್‌ವೈ ಮನೆಯಲ್ಲಿ ವಿಶೇಷ ಪೂಜೆ

07:58 AM Oct 03, 2017 | Team Udayavani |

ಬೆಂಗಳೂರು: ಕಾಶಿಯಿಂದ ಬಂದಿದ್ದ ಸುಮಾರು 20 ಮಂದಿ ನಾಗಾಸಾಧುಗಳು ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ವಿಶೇಷ ಪೂಜೆ ನಡೆಸಿದರು. ಸುಮಾರು 20 ನಿಮಿಷಗಳ ಕಾಲ ತಮ್ಮ ನಿವಾಸದಲ್ಲಿದ್ದ ನಾಗ ಸಾಧುಗಳಿಂದ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಆಶೀರ್ವಾದ ಪಡೆದರು. 

Advertisement

ವರ್ಷಕ್ಕೊಮ್ಮೆ ದೇಶ ಪರ್ಯಟನೆ ಮಾಡುವ ನಾಗಾಸಾಧುಗಳು, ಯಡಿಯೂರಪ್ಪ ಅವರನ್ನು ನೋಡಲು ಬಂದಿದ್ದೇವೆ. ತಕ್ಷಣ ಕರೆಸಿ ಎಂದು ಗಲಾಟೆ ಮಾಡಿದರು. ಈ ಸಂದರ್ಭದಲ್ಲಿ ದೇವನಹಳ್ಳಿಯಲ್ಲಿದ್ದ ಯಡಿಯೂರಪ್ಪ ಕೂಡಲೇ ಬಂದು ನಾಗಾಸಾಧುಗಳಿಂದ ಆಶೀರ್ವಾದ ಪಡೆದರು. ಯಡಿಯೂರಪ್ಪ ಬರುವ ಮೊದಲೇ ನಿವಾಸದೊಳಗೆ ಪ್ರವೇಶ ಮಾಡಿದ್ದ ನಾಗಾಸಾಧುಗಳು,
ದೇಶದಲ್ಲಿ ಮತ್ತೂಮ್ಮೆ ಬಿಜೆಪಿ ಸರ್ಕಾರ ಬರಲಿದೆ. ಮೋದಿಯವರು ಎರಡನೇ ಅವಧಿಗೆ ಪ್ರಧಾನಿ ಆಗುತ್ತಾರೆ. ರಾಜ್ಯದಲ್ಲಿ ಕೂಡಾ ಬಿಜೆಪಿ ಸರ್ಕಾರ ಬರಲಿದೆ. ನೀವು ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಭವಿಷ್ಯ ನುಡಿದು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next