Advertisement

“ಒಬ್ಬ ಮಹಿಳೆಯ ಹಣೆಗೆ ಸಿಂಧೂರ ಹಚ್ಚಿದರೆ ಮಾತು ಕೊಟ್ಟಂತೆ’: ಅಲಹಾಬಾದ್‌ ಹೈಕೋರ್ಟ್‌

10:54 AM Sep 15, 2021 | Team Udayavani |

ಅಲಹಾಬಾದ್‌: “ಒಬ್ಬ ಮಹಿಳೆಯ ಹಣೆಗೆ ವ್ಯಕ್ತಿ­ಯೊಬ್ಬ ಸಿಂಧೂರ ಇಟ್ಟಿದ್ದಾನೆಂದರೆ ಆತ ಆಕೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಂತೆ’ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

Advertisement

ಈ ಮೂಲಕ ವ್ಯಕ್ತಿಯೊಬ್ಬನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿದೆ. ವಿಚಾರಣೆ ವೇಳೆ ನ್ಯಾ|ವಿವೇಕ್‌ ಅಗರ್ವಾಲ್‌ ನೇತೃತ್ವದ ಏಕಸದಸ್ಯ ಪೀಠ, ಭಾರತದ ಸಂಪ್ರದಾಯದಲ್ಲಿ ಸಿಂಧೂರ ಹಚ್ಚುವುದಕ್ಕೆ ವಿಶೇಷ ಅರ್ಥವಿದೆ. ಹಣೆಗೆ ಸಿಂಧೂರ ಹಚ್ಚುವುದೆಂದರೆ ಆಕೆಯನ್ನು ಮಡದಿಯೆಂದು ಸ್ವೀಕರಿಸಿದಂತೆ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ಕುಮಾರ್‌ ವಿರುದ್ಧದ ಪ್ರಕರಣ ಕೈಬಿಡಲಾಗದು’ ಎಂದಿದೆ.

ಗಡಿ ರಸ್ತೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್‌ ಕುಮಾರ್‌ಗೆ ಅರ್ಜಿದಾರ ಯುವತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಅನಂತರ ಮದುವೆಗೆ ನಿಶ್ಚಯ ಮಾಡುವುದಾಗಿ ಆಕೆಯನ್ನು ಹರ್ದೋಯಿಗೆ ಕರೆದಿದ್ದ ಕುಮಾರ್‌, ಆಕೆಯ ಹಣೆಗೆ ಸಿಂಧೂರ ಹಚ್ಚುವಂಥ “ಮಾಂಗ್‌ಭರಾಯಿ’ ಎಂಬ ಕಾರ್ಯಕ್ರಮ ನಡೆಸಿ, ಅಲ್ಲಿಂದ ಲಕ್ನೋಗೆ ಕರೆದೊಯ್ದಿದ್ದ. ಅಲ್ಲಿನ ಹೊಟೇಲ್‌ವೊಂದರಲ್ಲಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಆತ, ಮದುವೆಯಾಗುವ ಭರವಸೆ ನೀಡಿ, ವಂಚಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next