ಗ್ರಾಮದ ಬುಡಕಟ್ಟು ಸಮುದಾಯವಾದ “ಭಿಲ್’ ಮೋಸ್ಟ್ ಡೇಂಜರಸ್ ಗ್ಯಾಂಗ್.
Advertisement
ಸ್ಥಳೀಯ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸಮುದಾಯದ ಬಹುತೇಕ ಕುಟುಂಬಗಳ ಮುಖ್ಯ ಕಸುಬು “ದರೋಡೆ, ಡಕಾಯಿತಿ, ಮನೆಕಳವು. ಪೊಲೀಸರ ಕಂಡರೆ ಹೆದರದೆ ಅವರನ್ನೆ ಹಿಮ್ಮೆಟ್ಟಿಸುವ ಕಲೆಕರಗತ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಕಲ್ಲು-ಬಾಣಗಳ ಬಿಡು ವುದರಲ್ಲಿ ಪರಿಣಿತರಾಗಿದ್ದಾರೆ. ಕಲ್ಲುಗಳಿಗೆ ದಾರ ಕಟ್ಟಿಕೊಂಡು ಎದುರಾಳಿ ಕಡೆಗೆಕಲ್ಲು ಎಸೆಯುತ್ತಾರೆ. ಯಾವುದೇ ಕಾರಣಕ್ಕೂ ಅವರ ಗುರಿ ತಪ್ಪುವುದಿಲ್ಲ. ಬಾಣವನ್ನೂ ಅಷ್ಟೇ ಸ್ಪಷ್ಟವಾಗಿ ಬಿಡುತ್ತಾರೆ. ಒಂದು ಕ್ಷಣ ಮೈಮರೆತರೆ ಎದುರಾಳಿಯ ಎದೆ ಸೀಳುವುದು ಗ್ಯಾರಂಟಿ.
Related Articles
ನೆರೆ ರಾಜ್ಯಗಳಲ್ಲಿ ಕುಕೃತ್ಯ ಎಸಗುವ ಆರೋಪಿಗಳು ತಮ್ಮ ಊರಿಗೆ ಹೋಗಿ ತಲೆಮರೆಸಿಕೊಳ್ಳುತ್ತಾರೆ. ಭಗೋಲಿ ಗ್ರಾಮಕ್ಕೆ ಪೊಲೀಸರಿಗೆ ನೋ ಎಂಟ್ರಿ. ಒಂದು ವೇಳೆ ಎಂಟ್ರಿ ಕೊಟ್ಟರೆ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಇಡೀ ಗ್ರಾಮಸ್ಥರು ಮುಗಿಬೀಳುತ್ತಾರೆ. ಬಿಲ್ಲು- ಬಾಣ, ಕಲ್ಲುಗಳಿಂದ ಹಲ್ಲೆ ನಡೆಸುತ್ತಾರೆ. ಹೀಗಾಗಿ ಇಲ್ಲಿಗೆ ಸ್ಥಳೀಯ ಪೊಲೀಸರೂ ಹೋಗಲು ಹೆದರುತ್ತಾರೆ. ಇದೇ ತಂಡ 2018ರಲ್ಲಿ ರಾತ್ರಿ ವೇಳೆ ಗಸ್ತಿನಲ್ಲಿದ್ದ ಕೋಡಿಗೇಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಮೇಲೆಕಲ್ಲು ತೂರಾಟ ನಡೆಸಿ ಪೊಲೀಸ್”303 ರೈಫಲ್’ ಕದೊಯ್ದಿದ್ದರು. ಅನಂತರಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಅಲ್ಲದೆ, ಭಗೋಲಿ ಗ್ರಾಮದಲ್ಲಿ ಚಿನ್ನಾಭರಣ ವಶಕ್ಕೆ ಪಡೆಯುವಾಗ ಪೊಲೀಸರ ಮೇಲೆ ಕಲ್ಲು ತೂರಾಟ, ಬಾಣಗಳ ಮೂಲಕಹೆದರಿಸಿದ್ದರು. ಅದರಿಂದ ಸ್ಥಳೀಯ ಪಿಎಸ್ಐ ಒಬ್ಬರಿಗೆ ಗಾಯವಾಗಿತ್ತು. ಇದೀಗ ಈ ಗ್ಯಾಂಗ್ನಕೆಲ ಸದಸ್ಯರ ಹಾವಳಿ ಕಡಿಮೆಯಾಗಿದ್ದರೂ, ಬೆಂಗಳೂರಿನ ಗಡಿ ಭಾಗ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಗಾಗ್ಗೆ ದರೋಡೆ ಎಸಗಿ ಪರಾರಿಯಾಗುತ್ತದೆ.
Advertisement
– ಮೋಹನ್ ಭದ್ರಾವತಿ