Advertisement

ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್‌

09:21 PM Jan 09, 2022 | Team Udayavani |

ಶಿಮ್ಲಾ: ಪ್ರವಾಸಿಗರ ರಾಜ್ಯವಾದ ಹಿಮಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಭಾರೀ ಪ್ರಮಾಣದ ಹಿಮವರ್ಷವಾಗುತ್ತಿದ್ದು, ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಶಿಮ್ಲಾ, ಮನಾಲಿಯಂಥ ಪ್ರಮುಖ ಪ್ರವಾಸಿ ತಾಣಗಳಿಗೂ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.

Advertisement

ಕುಫ್ರಿ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 55 ಇಂಚು ಹಿಮವರ್ಷವಾಗಿದೆ. ಸೋಮವಾರವೂ ಹಿಮವರ್ಷ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ. ಇದೇ ವೇಳೆ ಉತ್ತರ ಕಾಶ್ಮೀರದ ಗುಲ್ಮರ್ಗ್‌ನಲ್ಲಿ ಶನಿವಾರ ರಾತ್ರಿ ಉಷ್ಣಾಂಶ ಮೈನಸ್‌ 10 ಡಿಗ್ರಿ ಸೆಲ್ಸಿಯೆಸ್‌ಗೆ ತಲುಪಿದೆ. ಅಮರನಾಥ ಯಾತ್ರೆಯ ಬೇಸ್‌ ಕ್ಯಾಂಪ್‌ ಆಗಿರುವ ಪಗಲ್ಗಂನಲ್ಲಿ ಮೈನಸ್‌ 1.8 ಡಿಗ್ರಿ ಸೆ. ಉಷ್ಣಾಂಶ ವರದಿಯಾಗಿದೆ.
ನೆರೆ ರಾಷ್ಟ್ರ ಪಾಕಿಸ್ತಾನದ ಪ್ರವಾಸಿತಾಣವಾದ ಮುರ್ರೀಯಲ್ಲಿ ಶನಿವಾರ ಸಂಭವಿಸಿದ ಅನಿರೀಕ್ಷಿತ ಹಿಮವರ್ಷದಿಂದಾಗಿ ಸಾವಿ ಗೀ ಡಾ ದ ವರ ಸಂಖ್ಯೆ ಭಾನುವಾರ 23ಕ್ಕೆ ಏರಿಕೆಯಾಗಿದೆ.

ಪಂಜಾಬ್‌, ಹರ್ಯಾಣ, ದಿಲ್ಲಿಯಲ್ಲಿ ಮಳೆ:
ಶನಿವಾರ ರಾತ್ರಿಯಿಂದ ಪಂಜಾಬ್‌, ಹರ್ಯಾಣ ಮತ್ತು ನವದೆಹಲಿಯ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಪಂಜಾಬ್‌ನಲ್ಲಿ 10.2 ಡಿಗ್ರಿ ಸೆಲ್ಸಿಯೆಸ್‌, ಹರ್ಯಾಣದಲ್ಲಿ 11.8 ಡಿಗ್ರಿ ಸೆಲ್ಸಿಯೆಸ್‌ ಮತ್ತು ದೆಹಲಿಯಲ್ಲಿ 13.8 ಡಿಗ್ರಿ ಸೆಲ್ಸಿಯೆಸ್‌ ಉಷ್ಣಾಂಶ ದಾಖ ಲಾ ಗಿ ದೆ. ದೆಹಲಿಯಲ್ಲಿ ಕಳೆದ 22 ವರ್ಷಗಳ ಜನವರಿಯ ಏಕದಿನದಲ್ಲಿ ಸುರಿದ ಮಳೆಯ ದಾಖಲೆಗಳೆಲ್ಲವನ್ನೂ ಶನಿವಾರದ ಮಳೆ ಮುರಿದಿದ್ದಾಗಿ ತಿಳಿಸಲಾಗಿದೆ.

ಇದನ್ನೂ ಓದಿ : ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next