Advertisement

ಸಿದ್ಧಾರ್ಥ್ಗೆ ಕಾಫಿ ಬೆಳೆಗಾರರ ಭಾವಪೂರ್ಣ ಶ್ರದ್ಧಾಂಜಲಿ

11:33 AM Aug 01, 2019 | Naveen |

ಆಲ್ದೂರು: ಕಾಫಿ ಲೋಕದ ದಿಗ್ಗಜ, ಕಾಫಿ ಡೇ ಸಂಸ್ಥಾಪಕ ಜಿ.ವಿ.ಸಿದ್ಧಾರ್ಥ್ ಹೆಗ್ಡೆ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಶಾದಿ ಮಹಲ್ನಲ್ಲಿ ಕಾಫಿ ಬೆಳೆಗಾರರ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

Advertisement

ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಸಿ.ಸಿ.ಸುರೇಶ್‌ ಮಾತನಾಡಿ, 50 ಸಾವಿರ ಕುಟುಂಬಗಳಿಗೆ ಆಶ್ರಯ ನೀಡಿದ ಆಶಾಕಿರಣ ಇಂದು ಎಲ್ಲರನ್ನೂ ಬಿಟ್ಟು ಅಗಲಿರುವುದು ನೋವು ತಂದಿದೆ. ಕಾಫಿ ಬೆಳೆಗಾರರು ಉನ್ನತ ಮಟ್ಟದಲ್ಲಿ ಬೆಳೆಯಲು ಸಿದ್ಧಾರ್ಥ್ ಹೆಗ್ಡೆ ಕಾರಣ. ನಮ್ಮ ಮಲೆನಾಡಿನ ಕಾಫಿಯನ್ನು ದೇಶ-ವಿದೇಶದಲ್ಲಿ ಪರಿಚಯಿಸಿ ಮಲೆನಾಡಿಗೆ ಕೀರ್ತಿ ತಂದುಕೊಟ್ಟ ಹೆಗ್ಗಳಿಕೆ ಸಿದ್ಧಾರ್ಥ ಅವರಿಗೆ ಸಲ್ಲುತ್ತದೆ. ಅಂತಹ ದಿಗ್ಗಜನನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.

ತಾಪಂ ಸದಸ್ಯೆ ಭವ್ಯಾ ನಟೇಶ್‌ ಮಾತನಾಡಿ, ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿ ಬೆಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯನ್ನು ತಂದುಕೊಟ್ಟ ಧೀಮಂತ ವ್ಯಕ್ತಿ ಸಿದ್ಧಾರ್ಥ ಹೆಗ್ಡೆ. ವಿದೇಶದಲ್ಲೂ ಕಾಫಿ ಡೇಗಳನ್ನು ಪ್ರಾರಂಭಿಸಿ ಕಾಫಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಇಂತಹ ವ್ಯಕ್ತಿಯನ್ನು ಕಳೆದುಕೊಂಡ ಕಾಫಿನಾಡು ಬಡವಾಗಿದೆ ಎಂದು ಭಾವುಕರಾದರು.

ಡಿ.ಸಿ.ಗಿರೀಶ್‌ ಮಾತನಾಡಿ, ಅತ್ಯಲ್ಪ ಬಂಡವಾಳದಿಂದ ಉದ್ಯಮ ಪ್ರಾರಂಭಿಸಿ ಇಂದು 22 ಸಾವಿರ ಕೋಟಿ ರೂ.ಆಸ್ತಿಯ ಒಡೆಯನಾಗಿದ್ದ ಸಿದ್ಧಾರ್ಥ್ ಜಾಗತಿಕ ಮಟ್ಟದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅವರ ದಾರುಣ ಅಂತ್ಯ ಊಹಿಸಲು ಕಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.

ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಆಲ್ದೂರು ಗ್ರಾಪಂ ಅಧ್ಯಕ್ಷೆ ಪ್ರತಿಭಾ, ಎಪಿಎಂಸಿ ಸದಸ್ಯ ಕವೀಶ್‌, ಗ್ರಾಪಂ ಸದಸ್ಯರಾದ ನವರಾಜ್‌, ಆಶ್ರಫ್‌, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ರಘು, ಗಿರೀಶ್‌, ರಾಜೀವ್‌ ಮಾತನಾಡಿದರು.

Advertisement

ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಲವ, ವರ್ತಕರ ಸಂಘದ ಅಧ್ಯಕ್ಷ ಅನಿಲ್ ವಾಸ್‌, ಕಾರ್ಯದರ್ಶಿ ಮೂರ್ತಿ, ಕಸಾಪ ಹೋಬಳಿ ಅಧ್ಯಕ್ಷ ರವಿಕುಮಾರ್‌, ಬಿಜೆಪಿ ಮಂಡಲದ ಅಧ್ಯಕ್ಷ ಸಂಪತ್‌, ತಾ. ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಜೆಡಿಎಸ್‌ ಹೋಬಳಿ ಅಧ್ಯಕ್ಷ ಪ್ರವೀಣ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಮುದಾಬೀರ್‌, ತಾಪಂ ಮಾಜಿ ಸದಸ್ಯ ಮಹೇಶ್‌, ಪ್ರಶಾಂತ್‌, ಸಿದ್ಧಾರ್ಥ್, ನಾಗೇಶ್‌ ಹಾಗೂ ನೂರಾರು ಕಾಫಿ ಬೆಳೆಗಾರರು, ವಿವಿಧ ಸಂಘಟನೆಯವರು ಪಾಲ್ಗೊಂಡಿದ್ದರು.

ವಿ.ಜಿ.ಸಿದ್ಧಾರ್ಥ್ ನಿಧನದ ಹಿನ್ನೆಲೆಯಲ್ಲಿ ವರ್ತಕರ ಸಂಘದಿಂದ ಬೆ.11ಗಂಟೆಯಿಂದ 12ರ ವರೆಗೆ ಒಂದು ಗಂಟೆ ಕಾಲ ಅಂಗಡಿಗಳನ್ನು ಬಂದ್‌ ಮಾಡುವಂತೆ ಕರೆ ನೀಡಿದ್ದರಿಂದ, ಎಲ್ಲಾ ವರ್ತಕರು ಅಂಗಡಿಗಳನ್ನು ಬಂದ್‌ ಮಾಡಿ ಸಂತಾಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next