Advertisement

ಭಕ್ತರಿಗೆ ಸಂಗೀತ ರಸದೌತಣ

12:20 PM Feb 17, 2020 | Naveen |

ಆಲಮಟ್ಟಿ: ಈ ಭಾಗದ ಶ್ರೀಕ್ಷೇತ್ರಗಳಲ್ಲೊಂದಾಗಿರುವ ಯಲಗೂರ ಗ್ರಾಮದ ಯಲಗೂರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತತ ಎರಡು ದಿನ ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರಿಂದ ನಡೆದ ದಾಸವಾಣಿ ಹಾಗೂ ಗಾಯನ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

Advertisement

ರವಿವಾರ ಬೆಳಗ್ಗೆ ಪಲ್ಲಕ್ಕಿ ಮೆರವಣಿಗೆ ಹಾಗೂ ಕಾಕಡಾರತಿ, ಕಾರ್ತಿಕ ಇಳಿಸುವುದು ಸೇರಿದಂತೆ ವಿವಿಧ ರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಹರಶಾವಿಗೆ (ದಾಸೋಹ), ಅನ್ನದಾಸೋಹ ಜರುಗಿತು. ವಿಶ್ವೇಶತೀರ್ಥ ಶ್ರೀಪಾದಂಗಳವರ ಸಭಾಮಂಟಪದಲ್ಲಿ ಹರಿದಾಸ ಸಾಹಿತ್ಯಸಂಗೀತ ವೇದಿಕೆಯಲ್ಲಿ ತೆಂಗಿನ ತೋಟದ ಮೈದಾನದಲ್ಲಿ ನಿರಂತರ ದಾಸವಾಣಿ, ತಬಲಾ ಸೋಲೋ, ಜುಗಲಬಂಧಿ ಸೇರಿದಂತೆ ವಿವಿಧ ಸಂಗೀತ ರಸದೌತಣವನ್ನು ವೀಣಾ ಬಡಿಗೇರ ಮತ್ತು ವಾಣಿಶ್ರೀ ಧನ್ವಂತರಿಯವರ ಜುಗಲ್‌ ಬಂಧಿ, ವೀಣಾ ಥಿಟೆ, ಮೈಸೂರು ರಾಮಚಂದ್ರಾರಾವ್‌ ದಾಸವಾಣಿ, ಅರುಣಕುಮಾರ ಅವರ ತಾನಸೇನ್‌ ವಾದನ,
ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿಯವರು ಹಾಡಿದ ಸೂಳ್ಳು ನಮ್ಮಲ್ಲಿ ಇಲ್ಲವಯ್ನಾ ಸುಳ್ಳೇ ನಮ್ಮನೆ ದೇವರು, ಬನ್ನಿಸಲವಳಲ್ಲ ನಿಮ್ಮ ಪ್ರಸನ್ನಮೂರ್ತಿ ಯಲಗೂರವಾಸ ಎನ್ನುವ ಗಾಯನಕ್ಕೆ ನೆರೆದಜನ ತಲೆದೂಗುವಂತಾಗಿತ್ತು. ನಾಡಿನ ಖ್ಯಾತ ಗಾಯಕರು ಹಾಡಿದ ಹಿಂದೂಸ್ಥಾನಿ ಸಂಗೀತ, ದಾಸ ವಾಣಿ, ಭಕ್ತಿ ಗೀತೆಗಳ ಮೂಲಕ ನೆರೆದ ಜನತೆಯ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ಅನಂತ ಓಂಕಾರ, ನಾರಾಯಣ ಒಡೆಯರ, ಗೋಪಾಲ ಗದ್ದನಕೇರಿ, ಮುರಳಿ ಚಿಮ್ಮಲಗಿ, ಪ್ರಸನ್ನ ಕಟ್ಟಿ, ಸಂತೋಷ ಪೂಜಾರ, ಪ್ರಮೋದ ಕುಲಕರ್ಣಿ, ಆಲೂರ ಮೊದಲಾದವರಿದ್ದರು.

ಸ್ವಚ್ಛತೆಗೆ ಆದ್ಯತೆ: ಗ್ರಾಪಂ ಯಲಗೂರ, ದೇವಸ್ಥಾನ ಸಮಿತಿಯವರ ವಿಶೇಷ ಕಾಳಜಿಯಿಂದ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ದೂರದಿಂದ ಆಗಮಿಸಿರುವ ಭಕ್ತರು ತಾವು ಇಳಿದುಕೊಂಡಿರುವ ಸ್ಥಳದಲ್ಲಿ ನೈವೇದ್ಯ ತಯಾರಿಸಿಕೊಂಡು ಬಂದು ಗೋವಿಂದಾ. . . ಗೋವಿಂದಾ. . . ಎನ್ನುತ್ತ ದೇವಸ್ಥಾನಕ್ಕೆ ತೆರಳಿ ತಮ್ಮ ಭಕ್ತಿಯ ಸೇವೆಯನ್ನು ಸಮರ್ಪಿಸಿದರು.

ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಭಕ್ತರಿಗೆ ತೊಂದರೆಯಾಗದಂತೆ ಗ್ರಾಪಂ, ದೇವಸ್ಥಾನ ಸಮಿತಿಯವರು ಕುಡಿಯುವ ನೀರು, ವಾಹನಗಳ ನಿಲುಗಡೆಗಾಗಿ ಎರಡು ಕಡೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರು ಜನದಟ್ಟಣೆ ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು.

Advertisement

ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಹರಕೆಗಳು ಈಡೇರಿದ್ದರಿಂದ ಶನಿವಾರದಿಂದ ರವಿವಾರ ಸಂಜೆಯವರೆಗೂ ಕೃಷ್ಣಾನದಿಯಲ್ಲಿ ಮಿಂದು ದೇವಸ್ಥಾನದವರೆಗೂ ದೀಡ ನಮಸ್ಕಾರಗಳನ್ನು ಹಾಕುತ್ತಿರುವವರು ಸಂಖ್ಯೆ ಕಳೆದ ಬಾರಿಗಿಂತಲೂ ಹೆಚ್ಚಾಗಿತ್ತು.

„ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next