Advertisement

Alakemajalu: ಹಗಲಲ್ಲೇ 2 ಮನೆಗಳಿಂದ ಕಳವು

08:38 PM Oct 09, 2024 | Team Udayavani |

ವಿಟ್ಲ: ಇಡ್ಕಿದು ಗ್ರಾಮದ ಕೆಮನಾಜೆಯ ಪುಷ್ಪರಾಜ್‌ ಮತ್ತು ಕೃಷ್ಣಪ್ಪ ಕುಲಾಲ್‌ ಅವರ ಮನೆಗಳಿಗೆ ಬುಧವಾರ ಹಾಡಹಗಲಲ್ಲೇ ನುಗ್ಗಿದ ಕಳ್ಳರು ನಗ-ನಗದು ದೋಚಿದ್ದಾರೆ.

Advertisement

ಪುಷ್ಪರಾಜ್‌ ಮನೆಯಿಂದ ಸುಮಾರು 15 ಪವನ್‌ ಚಿನ್ನಾಭರಣ ಮತ್ತು ನೆರೆಯ ಕೃಷ್ಣಪ್ಪ ಕುಲಾಲ್‌ (ಕುಂಞ್ಞಣ್ಣ) ಮನೆಯಿಂದ ಸುಮಾರು 12 ಸಾವಿರ ರೂ. ನಗದು ಕಳವಾಗಿದೆ.

ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬಾ ಭಜನ ಮಂದಿರದಲ್ಲಿ ಮೂರ್ತಿ ಪ್ರತಿಷ್ಠೆ ನಡೆದಿದ್ದು, ಮನೆ ಮಂದಿ ಎಲ್ಲರೂ ಅಲ್ಲಿಗೆ ತೆರಳಿದ್ದರು. ಮರಳಿ ಬಂದಾಗ ಕಳವು ಕೃತ್ಯ ಅರಿವಿಗೆ ಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next