Advertisement

ಅಕ್ಷಯ ತೃತೀಯಾ: ಆಭರಣ ಖರೀದಿ ಸಡಗರ

01:16 AM May 08, 2019 | Team Udayavani |

ಮಂಗಳೂರು: ಅಕ್ಷಯ ತೃತೀಯಾ ದಿನವಾದ ಮಂಗಳವಾರ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ, ಚಿನ್ನಾಭರಣ ವ್ಯಾಪಾರ ಭರ್ಜರಿಯಾಗಿ ನಡೆಯಿತು.

Advertisement

ಅಕ್ಷಯ ತೃತೀಯಾದಂದು ಚಿನ್ನಾ ಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕನುಗುಣ ವಾಗಿ ತಲೆತಲಾಂತರದಿಂದಲೂ ಅಕ್ಷಯ ತೃತೀಯಾದಂದು ಚಿನ್ನ, ವಜ್ರಾಭರಣ ಖರೀದಿ ಮಾಡುವ ಸಂಪ್ರದಾಯ ಬೆಳೆದುಬಂದಿದೆ. ಅದರಂತೆ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಆಭರಣ ಪ್ರಿಯರು ಚಿನ್ನ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ಸಾಮಾನ್ಯವಾಗಿ ಅಕ್ಷಯ ತೃತೀಯಾದ ಆಸುಪಾಸಿನಲ್ಲಿ ಚಿನ್ನಾ ಭರಣ ಖರೀದಿಸಲು ಹೋಗುವ ಗ್ರಾಹಕರು ಮುಂಗಡ ಕಾದಿರಿಸಿ
ಅಕ್ಷಯ ತೃತೀಯಾದಂದು ಮನೆ ಗೊಯ್ಯುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ.

ಚಿನ್ನಾಭರಣ ಖರೀದಿ ಸಂಬಂಧ ಮಾರುಕಟ್ಟೆಯ ಬಗ್ಗೆ ಪರಿಶೀಲಿಸಿದಾಗ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ವ್ಯವಹಾರ ನಡೆದಿದೆ ಎನ್ನುತ್ತಾರೆ ಚಿನ್ನಾಭರಣಗಳ ಮಳಿಗೆಯ ಮಾಲಕರು. ವಿವಿಧ ಚಿನ್ನಾಭರಣ ಮಳಿಗೆಗಳು ದರ ಕಡಿತ, ಉಡುಗೊರೆ, ಉಚಿತ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಪ್ರಕಟಿಸಿ ಗ್ರಾಹಕರನ್ನು ಆಕರ್ಷಿಸಿದ್ದವು. ಇದರಿಂದ ಸಹಜವಾಗಿ ಗ್ರಾಹಕರೂ ಆಕರ್ಷಿತರಾಗಿ ಚಿನ್ನ ಖರೀದಿಯಲ್ಲಿ ತೊಡಗಿದ್ದರು. ರಾತ್ರಿ ವೇಳೆಯಲ್ಲಿಯೂ ಚಿನ್ನದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಅಧಿಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next