Advertisement

ಉ.ಪ್ರ.ದ 11 ವಿಧಾನಸಭಾ ಸೀಟುಗಳ ಬೈಪೋಲ್‌ : ಎಸ್‌ಪಿ ಏಕಾಂಗಿ ಹೋರಾಟ

10:17 AM Jun 05, 2019 | Team Udayavani |

ಲಕ್ನೋ : ಉತ್ತರ ಪ್ರದೇಶದ ಮಹಾ ಘಟಬಂಧನದಿಂದ ಹೊರಬರಲು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ನಿರ್ಧರಿಸಿದ ಬೆನ್ನಿಗೇ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ, ರಾಜ್ಯ ವಿಧಾನಸಭೆಯ 11 ಸೀಟುಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಕ್ಷ ಏಕಾಂಗಿಯಾಗಿ ಹೋರಾಡುವುದೆಂದು ಪ್ರಕಟಿಸಿದರು.

Advertisement

ಬಿಎಸ್‌ಪಿ ಜತೆಗಿನ ಮೈತ್ರಿ ಸಂಪೂರ್ಣವಾಗಿ ಕಡಿದು ಹೋದಲ್ಲಿ ಉಪ ಚುನಾವಣೆ ನಡೆಯಲಿರುವ ಎಲ್ಲ 11 ವಿಧಾನಸಭಾ ಸೀಟುಗಳಿಗೆ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವುದು; ಈ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗುವುದು; ನಮ್ಮ ಮುಂದಿನ ಮಾರ್ಗ ಬೇರ್ಪಟ್ಟರೂ ನಾವದನ್ನು ಸ್ವಾಗತಿಸುತ್ತೇವೆ ಎಂದು ಅಖೀಲೇಶ್‌ ಹೇಳಿದರು.

ಮಾಯಾವತಿ ಅವರು ಏಕಾಂಗಿಯಾಗಿ ಹೋರಾಡಲು ನಿರ್ಧರಿಸುವರೆಂಬುದನ್ನು ನೀವು ನಿರೀಕ್ಷಿಸುವಿರಾ ಎಂಬ ಮಾಧ್ಯಮದ ಪ್ರಶ್ನೆಗೆ ಅಖೀಲೇಶ್‌, “ಅದಕ್ಕೆ ಉತ್ತರಿಸುವುದು ಕಷ್ಟ; ನಮ್ಮ ಹಾದಿಗಳು ಬೇರ್ಪಟ್ಟರೂ ನಾವದನ್ನು ಸ್ವಾಗತಿಸುತ್ತೇವೆ; ಆಕೆಯ ಪಕ್ಷದ ಕಾರ್ಯಕರ್ತರಿಗೆ ನಮ್ಮ ಶುಭ ಹಾರೈಕೆಗಳು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next