Advertisement

ವಿಮಾನ ನಿಲ್ದಾಣ ಮಂಜೂರಿಗೆ ಯತ್ನ

11:33 AM Sep 26, 2021 | Team Udayavani |

ದಾವಣಗೆರೆ: ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಮಾಡಬೇಕೆಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ.ಈ ಬೇಡಿಕೆ ಈಡೇರಿಸುವುದಾಗಿ ನಾನು ಚುನಾವಣಾಪ್ರಣಾಳಿಕೆಯಲ್ಲಿಯೇ ಪ್ರಕಟಿಸಿಕೊಂಡಿದ್ದೆ.ಈವರೆಗೂ ಆ ಕೆಲಸ ಮಾಡಲಾಗಲಿಲ್ಲ ಎಂಬನೋವು ಈಗಲೂ ಕಾಡುತ್ತಿದೆ.

Advertisement

ಆದರೂ ನನ್ನಅವಧಿ ಮುಗಿಯುವುದರೊಳಗೆ ವಿಮಾನ ನಿಲ್ದಾಣಮಂಜೂರಿ ಮಾಡಿಸಲು ಸರ್ವ ಪ್ರಯತ್ನ ಮಾಡುತ್ತೇನೆಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು.75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಅಂಗವಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ವಾಣಿಜ್ಯ ಸಪ್ತಾಹ-ರಫ್ತುದಾರರ ಸಮಾವೇಶ ಉದ್ಘಾಟಿಸಿ ಅವರುಮಾತನಾಡಿದರು.

ವಿಮಾನ ನಿಲ್ದಾಣಕ್ಕಾಗಿ ಜಮೀನುಗುರುತಿಸಲಾಗಿತ್ತು. ಆಗ ಇದನ್ನು ವಿರೋಧಿಸಿ ಕೆಲವರುಪ್ರತಿಭಟನೆ ಮಾಡಿದರು. ಜಮೀನು ಕೈಬಿಟ್ಟಾಗಪ್ರತಿಭಟನೆ ನೇತೃತ್ವವಹಿಸಿದವರಿಗೆ ಸನ್ಮಾನವನ್ನೂಮಾಡಲಾಗಿತ್ತು. ಅಡ್ಡಿಯಾದವರ ಯಾರ ಹೆಸರನ್ನೂನಾನು ಹೇಳಲು ಇಚ್ಛಿಸುವುದಿಲ್ಲ. ಒಳ್ಳೆಯ ಕೆಲಸಮಾಡುವಾಗ ಅಡಚಣೆಗಳು ಆಗುತ್ತಲೇ ಇರುತ್ತವೆ.ಇದನ್ನೆಲ್ಲ ಮೆಟ್ಟಿನಿಂತು ಕೆಲಸ ಮಾಡಲು ಹೊರಟಾಗ ವಿಳಂಬವಾಗುವುದು ಸಹಜ.

ಇದೇ ರೀತಿ ರಾಷ್ಟ್ರೀಯಶಿಕ್ಷಣ ನೀತಿ ಒಳ್ಳೆಯ ವಿಚಾರ ಇದಕ್ಕೂ ಪ್ರತಿಪಕ್ಷದವರುಅಡ್ಡಿ ಮಾಡಿದರು. ವಿರೋಧದ ನಡುವೆಯೂಅನುಷ್ಠಾನಗೊಳಿಸಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಮೀನಿನತೊಂದರೆಯಿದ್ದು, ಜಾಗದ ಹುಡುಕಾಟನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರಅನುಮೋದನೆ ನೀಡಿದ್ದು, ಜಿಲ್ಲೆಯಲ್ಲಿ ಉತ್ತಮಭೂಮಿ ಸಿಕ್ಕ ನಂತರ ತುಂಗಭದ್ರಾ ನದಿಯಿಂದ ಪೈಪ್‌ಲೈನ್‌ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು.

ವಿದ್ಯುತ್‌, ಸಾರಿಗೆ ಸಂಪರ್ಕ, ಸೇರಿದಂತೆ ಉದ್ಯಮಸೃಷ್ಟಿಗೆ ಬೇಕಾದ ಮೂಲಭೂತ ಸವಲತ್ತುಗಳನ್ನುಒದಗಿಸಲಾಗುವುದು. ಜಿಲ್ಲೆಯಿಂದ ನಾನಾರಾಜ್ಯಗಳಿಗೆ ಸರಕು ಮತ್ತು ಸೇವೆಗಳು ರಫ್ತಾಗುತ್ತಿದ್ದು,ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಲು ಪ್ರಯತ್ನಿಸಬೇಕು.ಶೇ. 90 ರಷ್ಟು ಸರ್ಕಾರಿ ಕೈಗಾರಿಕೆಗಳು ಮುಳುಗಿವೆ.ಹಾಗಾಗಿ ಬೃಹತ್‌ ಕೈಗಾರಿಕೆಗಳನ್ನು ಕೇಂದ್ರಸರ್ಕಾರದಿಂದ ಮಾಡಲಾಗುತ್ತಿಲ್ಲ. ಯಾರಾದರೂಪ್ರಾರಂಭ ಮಾಡುವುದಿದ್ದರೆ ನಾವು ಅದಕ್ಕೆ ಸಂಪೂರ್ಣಉತ್ತೇಜನ ನೀಡುತ್ತೇವೆ ಎಂದು ಭರವಸೆ ನೀಡಿದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ,ಜಿಲ್ಲೆಯಲ್ಲಿ 18ರಿಂದ 20 ರಫ್ತುದಾರರು ಅಮೆರಿಕ,ಯೂರೋಪ್‌, ದಕ್ಷಿಣ ಆμÅಕಾ, ದುಬೆ„ ಸೇರಿದಂತೆಅನೇಕ ರಾಷ್ಟ್ರಗಳಿಗೆ ಉತ್ಪನ್ನಗಳು ರಫ್ತಾಗುತ್ತಿದೆ.ಕಂಟೇನರ್‌ಗಳು ಏಕಸ್ವಾಮ್ಯ ಪದ್ಧತಿ ಹೊಂದಿದ್ದು,ಕೊರೊನಾ ಸಂದರ್ಭದಲ್ಲಿ ಅವರು ಹೇಳಿದ್ದೇದರ ಎಂಬಂತಾಗಿತ್ತು ಎಂದು ಹರಿಹರ ಹಾಗೂದಾವಣಗೆರೆ ಇಂಡಸ್ಟ್ರೀಯಲ್‌ ಏರಿಯಾ ರಫ್ತುದಾರರುತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ವಾಣಿಜ್ಯಮತ್ತು ಕೈಗಾರಿಕೆ ಇಲಾಖೆಯಿಂದ ಈ ಕುರಿತುಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದನ್ನು ಶೀಘ್ರವಾಗಿಪರಿಹರಿಸಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕ ಎಚ್‌.ಎಸ್‌. ಜಯಪ್ರಕಾಶ್‌ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ರಫು¤ ಕೈಗಾರಿಕೋದ್ಯಮಿಗಳಾದ ಎಂ.ಆರ್‌.ಸತ್ಯನಾರಾಯಣ, ಜಿ. ಗಿರೀಶ್‌, ಕರಿಬಸಪ್ಪ, ಪ್ರಕಾಶ್‌ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಫ್ತು ಕೈಪಿಡಿಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಸಿ.ಬಿ. ರಿಷ್ಯಂತ್‌, ಮಹಾನಗರ ಪಾಲಿಕೆ ಮಹಾಪೌರಎಸ್‌.ಟಿ. ವೀರೇಶ್‌, ದಾವಣಗೆರೆ-ಹರಿಹರನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷದೇವರಮನಿ ಶಿವಕುಮಾರ್‌, ಫಾರಿನ್‌ ಟ್ರೇಡ್‌ನ‌ಉಪಮಹಾನಿರ್ದೇಶಕ ಅಕ್ಷಯ್‌ಎಸ್‌.ಸಿ., ಜವಳಿಪಾರ್ಕ್‌ ಅಧ್ಯಕ್ಷ ವೃಷಭೇಂದ್ರಪ್ಪ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ರಫ್ತು ಮಾಡುತ್ತಿರುವ ಕೆಲವುಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next