Advertisement

ವಿಮಾನದೊಳಗೆ ಸಿಗರೇಟು ಸೇದಿದ ವ್ಯಕ್ತಿ

10:57 PM Jan 09, 2023 | Team Udayavani |

ಹೊಸದಿಲ್ಲಿ: ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂರ್ತವಿಸರ್ಜಿಸಿದ್ದ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬಗೊಳಿಸಿದ್ದಕ್ಕಾಗಿ ಡಿಜಿಸಿಎಯಿಂದ ತರಾಟೆಗೆ ಒಳಪಟ್ಟಿದ್ದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ, ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

Advertisement

ವಿಮಾನದಲ್ಲಿ ಸಿಗರೇಟ್‌ ಸೇದಿದ್ದ ವ್ಯಕ್ತಿಯ ವಿಚಾರ ಮುಚ್ಚಿಟ್ಟಿದ್ದಕ್ಕಾಗಿ ಮತ್ತೆ ವಿವಾದಕ್ಕೆ ಗುರಿಯಾಗಿದೆ. ಈ ಕುರಿತು ಡಿಜಿಸಿಎ ಏರ್‌ಇಂಡಿಯಾಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ಡಿ.6ರಂದು ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಿಗರೇಟ್‌ ಸೇದಿದ್ದಾನೆ. ಮತ್ತೂಂದು ಪ್ರಕರಣದಲ್ಲಿ ಸಹ ಮಹಿಳಾ ಪ್ರಯಾಣಿಕರ ಆಸನವನ್ನ ಆಕ್ರಮಿಸಿಕೊಂಡ ವ್ಯಕ್ತಿ, ಆಕೆಯ ಬ್ಲ್ಯಾಂಕೇಟ್‌ ಕಸಿದು, ಸ್ಥಳಾವಕಾಶ ಮಾಡಿಕೊಡದೇ ದಾಂದಲೆ ನಡೆಸಿದ್ದಾನೆ. ಈ ಎರಡೂ ವಿಚಾರಗಳನ್ನು ಏರ್‌ ಇಂಡಿಯಾ ಡಿಜಿಸಿಎ ಗಮನಕ್ಕೆ ತಂದಿಲ್ಲ ಹಾಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ನೋಟಿಸ್‌ ಜಾರಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next