Advertisement

ಮಂಗಳೂರಿನಲ್ಲಿ ಇಳಿಯದ ಏರ್ ಇಂಡಿಯಾ ವಿಮಾನ

09:54 AM Aug 09, 2019 | Hari Prasad |

ಮಂಗಳೂರು: ದುಬಾಯಿಯಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಪ್ರಯಾಣಿಕರ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯದೇ ಕೊಯಮುತ್ತೂರಿಗೆ ತನ್ನ ಪಥ ಬದಲಿಸಿದ ಘಟನೆ ಇಂದು ವರದಿಯಾಗಿದೆ.

Advertisement

ದುಬಾಯಿಯಿಂದ ಹೊರಟು ಮಂಗಳೂರಿಗೆ ಗುರುವಾರ ಬೆಳಿಗ್ಗೆ 5 ಗಂಟೆಗೆ ಆಗಮಿಸಿದ ಈ ವಿಮಾನವು ಭಾರೀ ಗಾಳಿ ಬೀಸುತ್ತಿದ್ದ ಕಾರಣ ಹಾಗೂ ವಿಪರೀತ ಮಳೆಯಾಗುತ್ತಿದ್ದ ಕಾರಣದಿಂದ ಈ ವಿಮಾನಕ್ಕೆ ಇಳಿಯಲು ಅನುಮತಿ ಸಿಗಲಿಲ್ಲ.

ಬಳಿಕ ಪೈಲಟ್ ವಿಮಾನವನ್ನು ಕೊಯಮುತ್ತೂರಿಗೆ ತೆಗೆದುಕೊಂಡು ಹೋದರು. ಇದೀಗ ಈ ವಿಮಾನವು ಮಧ್ಯಾಹ್ನ 2.30ರ ಹೊತ್ತಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next