Advertisement

ಉಗ್ರ ಸಂಘಟನೆಗಳಿಗೆ ನೆರವು: ಹಲವೆಡೆ ದಾಳಿ

12:18 AM Oct 23, 2022 | Team Udayavani |

ಶ್ರೀನಗರ/ರಂಬಾನ್‌: ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡುವ ಜಾಲದ ವಿರುದ್ಧ ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಆಡಳಿತ ಕಠಿನ ನಿಲುವು ಮುಂದುವರಿಸಿದೆ.

Advertisement

ಶನಿವಾರ ರಾಜ್ಯ ತನಿಖಾ ಸಂಸ್ಥೆ 14 ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದೆ. ಶ್ರೀನಗರ, ಸೋಪುರ್‌, ಬಾರಾಮುಲ್ಲಾ ಮತ್ತು ಶೋಪಿಯಾನ್‌ನಲ್ಲಿರುವ ಉದ್ಯಮಿಗಳು, ಪ್ರಮುಖ ವ್ಯಕ್ತಿಗಳ ನಿವಾಸಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಉಗ್ರರಿಗೆ ವಿತ್ತೀಯ ನೆರವು ನೀಡುವ ಆರೋಪಕ್ಕೆ ಸಂಬಂಧಿಸಿದಂತೆ ಶೋಧಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡುವುದರ ಬಗ್ಗೆ ಖಚಿತ ಮಾಹಿತಿಯ ಆಧಾರದ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ.

ಜಾಲ ಬಯಲು: ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ರಂಬಾನ್‌ನ ಕುಗ್ರಾಮವೊಂದರಲ್ಲಿ ಶಸ್ತ್ರಾಸ್ತ್ರ ಪೂರೈಕೆ ಜಾಲವನ್ನು ಭದ್ರತಾ ಪಡೆಗಳು ಛೇದಿಸಿದ್ದಾರೆ. 6 ಎ.ಕೆ. ರೈಫ‌ಲ್‌ ಮ್ಯಾಗಜೀನ್‌ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿ­ಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next