Advertisement

ಎಐಎಡಿಎಂಕೆ ವಿವಾದ: ಯಥಾಸ್ಥಿತಿ ಕಾಯ್ದುಕೊಳ್ಳಿ; ಸುಪ್ರೀಂ ಸೂಚನೆ

09:59 PM Jul 29, 2022 | Team Udayavani |

ನವದೆಹಲಿ: ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಆಂತರಿಕ ವಿವಾದದ ಕುರಿತಂತೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್‌, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಒ. ಪನೀರ್‌ ಸೆಲ್ವಂ ಮತ್ತು ಎಐಎಡಿಎಂಕೆ ನಾಯಕ ಎ. ಪಳನಿಸ್ವಾಮಿ ಅವರಿಗೆ ಸೂಚಿಸಿದೆ.

Advertisement

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವನ್ನೊಳಗೊಂಡ ನ್ಯಾಯಪೀಠವು ಈ ಸೂಚನೆಗಳನ್ನು ಕೊಟ್ಟಿದೆ.

ಹಾಗೆಯೇ ಜು. 11ರಂದು ನಡೆದಿದ್ದ ಎಐಎಡಿಎಂಕೆ ಸಾಮಾನ್ಯ ಸಭೆಯ ಔಚಿತ್ಯವನ್ನು ಪನ್ನೀರಸೆಲ್ವಂ ಮತ್ತು ಇತರರು ಪ್ರಶ್ನಿಸಿದ್ದು, ಅವರ ಅರ್ಜಿಗಳನ್ನು ಮೂರು ವಾರಗಳೊಳಗೆ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್‌, ಮದ್ರಾಸ್‌ ಹೈಕೋರ್ಟ್‌ಗೆ ಸೂಚಿಸಿದೆ.

ಜು. 11ರಂದು ನಡೆದಿದ್ದ ಸಭೆಯಲ್ಲಿ ಪನ್ನೀರ್‌ ಸೆಲ್ವಂ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆಧಾರದಲ್ಲಿ ಹೊರಹಾಕಲಾಗಿತ್ತು. ಜೊತೆಗೆ, ಮಾಜಿ ಸಿಎಂ ಹಾಗೂ ಪಕ್ಷದ ಮತ್ತೊಬ್ಬ ನಾಯಕ ಎ. ಪಳನಿಸ್ವಾಮಿ ಅವರನ್ನು, ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next