Advertisement

ಆರ್‌ಆರ್‌ಆರ್‌: ಥಿಯೇಟರ್‌ಗಳಲ್ಲಿ ತೆರೆಗೇ ಬೇಲಿ!

07:16 PM Mar 23, 2022 | Team Udayavani |

ವಿಶಾಖಪಟ್ಟಣ: ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್‌’ ಸಿನಿಮಾ ಶುಕ್ರವಾರ ದೇಶದಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ. ಅದೇ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶ್ರೀಕಾಕುಲಂನ ಥಿಯೇಟರ್‌ ಒಂದರಲ್ಲಿ ತೆರೆಗೇ ಬೇಲಿ ಹಾಕಲಾಗಿದೆ!

Advertisement

ಹೌದು. ಶ್ರೀಕಾಕುಲಂನ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್‌ ನಟನೆಯ “ಪುಷ್ಪಾ’ ಸಿನಿಮಾ ಬಿಡುಗಡೆಯಾದಾಗ, ಸಿನಿ ಪ್ರಿಯರು ಸೀಟಿನಿಂದ ಎದ್ದು, ತೆರೆ ಮುಂದೆ ನೃತ್ಯ ಮಾಡಿದ್ದರಂತೆ. ಅದರಿಂದಾಗಿ ತೆರೆಯೇ ಹರಿದುಹೋಗಿತ್ತಂತೆ. ಈಗ ದಕ್ಷಿಣ ಭಾರತ ಖ್ಯಾತ ನಟರಾದ ಜೂ. ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಇಬ್ಬರೂ “ಆರ್‌ಆರ್‌ಆರ್‌’ ಮೂಲಕ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅವರಿಬ್ಬರ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದು, ತೆರೆ ಮತ್ತೆ ಹರಿಯುವ ಎಲ್ಲಾ ಸಾಧ್ಯತೆಯೂ ಇದೆ. ಹಾಗಾಗಿ ತೆರೆ ಹಾಳಾಗದಂತೆ ಕಾಪಾಡುವ ನಿಟ್ಟಿನಲ್ಲಿ ತೆರೆಗೆ ಬೇಲಿಯ ರಕ್ಷಣೆ ಮಾಡಿರುವುದಾಗಿ ಥಿಯೇಟರ್‌ನ ಮೇಲ್ವಿಚಾರಕ ಸೂರ್ಯ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next