Advertisement

6, 7ರಂದು ವಿ.ಸಿ.ಫಾರಂನಲ್ಲಿ ಕೃಷಿ ಮೇಳ

01:38 PM Dec 04, 2019 | Suhan S |

ಮಂಡ್ಯ: ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಡಿ.6,7ರಂದು ಕೃಷಿಮೇಳ-2019 ಆಯೋಜಿಸಲಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್‌(ಕೃಷಿ) ಡಾ.ವೆಂಕಟೇಶ್‌ ತಿಳಿಸಿದರು.

Advertisement

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸುಸ್ಥಿರ ಕೃಷಿಗೆ ನೀರಿನ ಸದ್ಭಳಕೆಶೀರ್ಷಿಕೆಯಡಿ ಕೃಷಿಮೇಳ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉದ್ಘಾಟನೆ: 6ರಂದು ಬೆಳಗ್ಗೆ 10ಗಂಟೆಗೆ ಕೃಷಿಮೇಳ ಮತ್ತು ಪ್ರಾತ್ಯಕ್ಷಿಕೆಯನ್ನು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಉದ್ಘಾಟಿಸಲಿದ್ದು, ಕೃಷಿ ವಸ್ತುಪ್ರದರ್ಶನವನ್ನು ಜಿಪಂ ಸಿಇಒ ಯಾಲಕ್ಕಿಗೌಡ ಉದ್ಘಾಟಿಸಲಿದ್ದಾರೆ. ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ.

7ರಂದು ಬೆಳಗ್ಗೆ 10.30ಕ್ಕೆ ನೂತನ ತಾಂತ್ರಿಕತೆಗಳ ಲೋಕಾರ್ಪಣೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾಡಲಿದ್ದಾರೆ. ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ವೇಣುಗೋಪಾಲ್‌ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು. ಕರ್ನಾಟಕ ಸರ್ಕಾರದ ಹಣ ಕಾಸು ಇಲಾಖೆ ಅಪರ ಮುಖ್ಯ ಕಾರ್ಯ ದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ಕೃಷಿ ಮತ್ತು ತೋಟ ಗಾ ರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಠಾರಿಯಾ, ಕೃಷಿ ವಿವಿ

ವ್ಯವ ಸ್ಥಾಪನಾ ಮಂಡಳಿ ಸದ ಸ್ಯ ರಾದ ಶ್ರೀನಿವಾಸಯ್ಯ,ಸುಬ್ರಹ್ಮಣಿ, ಶಿವಕುಮಾರ್‌, ಡಾ.ಅಶ್ವತ್ಥ ನಾರಾಯಣ, ಪ್ರೊ.ಶಕುಂತಲಾ ಭಾಗವಹಿಸಲಿದ್ದಾರೆ ಎಂದರು.

Advertisement

ರೈತರೊಂದಿಗೆ ಸಂವಾದ: ನಿರ್ದೇಶಕ ಡಾ.ವಾಸುದೇವನ್‌ ಮಾತನಾಡಿ, ಕೃಷಿಯಲ್ಲಿ ನೀರಿನ ಸದ್ಭಳಕೆ ಜತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು. ಅಂತೆಯೇ, 25ರಿಂದ 30

ತರಕಾರಿ ಬೆಳೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುವುದು. ಭತ್ತ, ರಾಗಿ, ಸಿರಿಧಾನ್ಯ, ಮುಸುಕಿನ ಜೋಳ, ವಾಣಿಜ್ಯ ಬೆಳೆ, ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಬೆಳೆ, ಮೇವಿನ ಬೆಳೆ ಹೊಸ ಮಾದರಿ ಪರಿಚಯ, ರೈತರೊಂದಿಗೆ ಸಂವಾದ ನಡೆಯಲಿದೆ ಎಂದರು.

ತರಕಾರಿ ಬೆಳೆ ಪ್ರಾತ್ಯಕಿಕೆ: ಕೃಷಿ ಮೇಳದಲ್ಲಿ ಗಂಗಾವತಿ ಸೋನಾ ಎಂಬ ಭತ್ತದ ಹೊಸ ತಳಿಯನ್ನು ಪರಿಚಯಿಸ ಲಾಗುತ್ತಿದೆ. 20 ಬಗೆಯ ಹೊಸ ತರಕಾರಿಬೆಳೆಯ ಪ್ರಾತ್ಯಕ್ಷಿಕೆ, ಸಿಒಬಿ ಸಿಎಂ 16061, 16062 ಎಂಬ ಕಬ್ಬಿನ ಹೊಸ ತಳಿಯನ್ನು ಪರಿಚಯಿಸಲಾಗುತ್ತಿದೆ. ಕೆ.ಎಂ. ಆರ್‌. 430 ಎಂಬ ರಾಗಿ ತಳಿ ಹಾಗೂ ಎಂ.. ಎಚ್‌. 14-5 ಮುಸುಕಿನ ಜೋಳ ತಳಿ ಪರಿಚಯಿಸ ಲಾಗುತ್ತದೆ ಎಂದು ವಿವರಿಸಿದರು.

ಮೇಳದಲ್ಲಿ 150 ರಿಂದ 160 ಮಳಿಗೆ ತೆರೆಯಲಾಗುತ್ತಿದೆ. ವಿವಿಧ ಇಲಾಖೆಯಿಂದ ರೈತರಿಗೆ ಸಿಗಬಹುದಾದ ಸೌಲಭ್ಯದ ಮಾಹಿತಿಯೂ ನೀಡಲಾಗುತ್ತದೆ. ನಗರದಿಂದ ವಿ.ಸಿ.ಫಾರಂವರೆಗೆ ವಾಹನದ ಸೌಲಭ್ಯವಿರಲಿದೆ. ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ಬಸ್‌ ಸಂಚರಿಸಲಿದೆ ಎಂದರು. ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next