Advertisement

ಇಷ್ಟಾರ್ಥ ಸಿದ್ಧಿಗಾಗಿ ಅಘೋರಿಗಳ ಆಶೀರ್ವಾದ ಪಡೆದ ಬಿಎಸ್‌ವೈ!

04:34 PM Oct 02, 2017 | |

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಲು ಶತ ಪ್ರಯತ್ನ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜನಬಲ ಮತ್ತು ದೈವ ಬಲದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

Advertisement

ನವರಾತ್ರಿಯ ನವಮಿಯ ವೇಳೆ ಉತ್ತರ ಭಾರತ ಮೂಲದ ಅಘೋರಿ ಸಾಧುಗಳನ್ನು ಗುಟ್ಟಾಗಿ ಡಾಲರ್ಸ್‌ ಕಾಲೋನಿಯ ಧವಳಗಿರಿ  ನಿವಾಸಕ್ಕೆ ಕರೆಸಿಕೊಂಡು ಆಶೀರ್ವಾದ ಪಡೆದಿರುವುದು ಬೆಳಕಿಗೆ ಬಂದಿದೆ.   

7 ಕ್ಕೂ ಹೆಚ್ಚು ನಾಗಾ ಸಾಧುಗಳು ಆಗಮಿಸಿ 20 ನಿಮಿಷಳ ಕಾಲ ಮಾತುಕತೆ ನಡೆಸಿ  ಬಿಎಸ್‌ವೈ ಇಷ್ಟಾರ್ಥ ಈಡೇರುವಂತೆ ಆಶೀರ್ವಾದ ಮಾಡಿದ್ದಾರೆ. 

ಸಾಧುಗಳ ಸಲಹೆಯಂತೆ ಬಿಎಸ್‌ವೈ ಅವರು ವಿಜಯದಶಮಿಯಂದು ತಂಜಾವೂರಿನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. 

ಸರ್ವ ಸಂಘ ಪರಿತ್ಯಾಗಿಗಳಾದ ಅಘೋರಿಗಳಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ನಂಬಿಕೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next