Advertisement

ಮತ್ತೆ ಮಳೆ-ಆತಂಕದಲ್ಲಿ ನೇಗಿಲಯೋಗಿ

02:50 PM Aug 30, 2022 | Team Udayavani |

ಕಲಬುರಗಿ: ಕಳೆದ ಕೆಲ ದಿನಗಳಿಂದ ತಗ್ಗಿದ ಮಳೆಯು ಈಗ ಹಿಡಿದು ಬಿಟ್ಟು ಸುರಿಯಲಾರಂಭಿಸಿದ್ದು, ರೈತ ಆತಂಕಕ್ಕೆ ಒಳಗಾಗಿದ್ದಾನೆ.

Advertisement

ಸೋಮವಾರ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಬೆಳೆಗಳಲ್ಲಿ ಮತ್ತೆ ನೀರು ನಿಲ್ಲುವಂತಾಗಿದೆ. ಅಲ್ಪಾವಧಿ ಬೆಳೆಗಳಾದ ಹೆಸರು ರಾಶಿಗೆ ಬಂದಿದೆ. ಆದರೆ ಮಳೆ ಹಾನಿಯುಂಟು ಮಾಡಿದ್ದಲ್ಲದೇ ರಾಶಿ ಮಾಡದಂತಾಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಹೆಸರು ಬೆಳೆ ಸೇಡಂ ಮತ್ತು ಚಿಂಚೋಳಿ ಹಾಗೂ ಚಿತ್ತಾಪುರ ತಾಲೂಕಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿದ್ದು, ಆದರೆ ಕಳೆದ ಮೂರು ದಿನಗಳಿಂದ ಹಿಡಿದು ಬಿಟ್ಟು ಸುರಿಯುತ್ತಿರುವ ಮಳೆ ಹಾನಿಗೆ ಕಾರಣವಾಗುತ್ತಿದೆ. ಈ ಮೂರು ತಾಲೂಕುಗಳಲ್ಲಿ 15ರಿಂದ 20 ಮೀ. ಮೀ ಮಳೆಯಾಗಿದೆ.

80 ಕೋ. ರೂ ಬೆಳೆ ಹಾನಿ: ಪ್ರಸಕ್ತವಾಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 1.11 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಆಗಿರುವ ಕುರಿತಾಗಿ ಜಂಟಿ ಸಮೀಕ್ಷೆಯಾಗಿದೆ. ಆದರೆ ಬೆಳೆ ಸಮೀಕ್ಷೆ ಕಾರ್ಯಕ್ಕೆ ಮಳೆ ಅಡಚಣೆಯುಂಟಾಗಿದೆ. ಶೇ.15ರಷ್ಟು ಮಾತ್ರ ಬೆಳೆ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಭಾರಿ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next