Advertisement

ಮತ್ತೆ ಅಹೋರಾತ್ರಿ ಧರಣಿ

10:25 AM Dec 24, 2019 | Team Udayavani |

ಧಾರವಾಡ: ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಹಿಂಪಡೆದಿದ್ದ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೋಮವಾರದಿಂದ ಮತ್ತೆ ಧರಣಿ ಆರಂಭಿಸಿದ್ದಾರೆ.

Advertisement

ಡಿ.17ರಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದ ಸದಸ್ಯರು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಡಿ. 19ಕ್ಕೆ ತಾತ್ಕಾಲಿಕವಾಗಿ ಧರಣಿ ಅಂತ್ಯ ಮಾಡಿದ್ದರು. ಡಿ. 21ರಂದು ನಿಷೇಧಾಜ್ಞೆ ಅಂತ್ಯಗೊಂಡಿದ್ದು, ಇದಾದ ಬಳಿಕವೂ ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಲಭಿಸದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹಾಗೂ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತೃತ್ವದಲ್ಲಿ ಬಹುತೇಕ ಕಾಂಗ್ರೆಸ್‌ ಪಕ್ಷದ ಜಿಪಂ ಸದಸ್ಯರು ಮತ್ತೆ ಜಿಪಂ ಕಚೇರಿಯ ಪ್ರವೇಶ ದ್ವಾರದ ಬಳಿ ಧರಣಿ ಕೈಗೊಂಡಿದ್ದಾರೆ. ಬಿಜೆಪಿ ಸದಸ್ಯರೊಂದಿಗೆ ಕೆಲ ಕಾಂಗ್ರೆಸ್‌ ಸದಸ್ಯರೂ ಗೈರಾಗಿದ್ದು, ಆಡಳಿತಾರೂಡ ಪಕ್ಷಕ್ಕೆ ಇರಿಸು ಮುರಿಸು ಉಂಟಾಗಿದೆ.

ರೈತರಿಂದ ಮನವಿ: ಬೆಳಗ್ಗೆಯಿಂದ ಆರಂಭಿಸಿದ ಧರಣಿಗೆ ಕುಂದಗೋಳ ತಾಲೂಕಿನ ಯರೇಬೂದಿಹಾಳದ ಗ್ರಾಪಂ ವ್ಯಾಪ್ತಿಯ ರೈತರು ಬೆಂಬಲ ನೀಡಿದ್ದು, ಅಲ್ಲದೇ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಪಂ ಅಧ್ಯಕ್ಷರಿಗೆ ಮನವಿ ಕೂಡ ಸಲ್ಲಿಸಿದರು.

ಮಧ್ಯಾಹ್ನದ ಸ್ಥಳದಲ್ಲಿಯೇ ಊಟ ಮಾಡಿದ ಸದಸ್ಯರಿಗೆ ಧರಣಿ ಕೈಬಿಡುವಂತೆ ಜಿಪಂ ಸಿಇಒ ಡಾ| ಸತೀಶ ಮನವಿ ಮಾಡಿದರು. ಆದರೆ ನೆರೆ ಪರಿಹಾರ ಕಾಮಗಾರಿಯಲ್ಲಿ ಆಗಿರುವ ಅವಗಣನೆ ಸರಿಪಡಿಸಿ ನಮಗೆ ಆದ್ಯತೆ ನೀಡುವರೆಗೂ ಧರಣಿ ಕೈಬಿಡಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next