Advertisement

ನಿಯಮ ಗಾಳಿಗೆ ತೂರುತ್ತಿವೆ ಆಸ್ಪತ್ರೆಗಳು

11:07 AM Nov 08, 2019 | Naveen |

„ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬಳಸಿದ ಸಿರಿಂಜ್‌, ಸೂಜಿ ಹಾಗೂ ಅವಧಿ ಮುಗಿದ ಔಷಧ, ಮಾತ್ರೆಗಳನ್ನು ರಸ್ತೆ ಪಕ್ಕದಲ್ಲೇ ಬಿಸಾಡುತ್ತಿದ್ದರೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ. ಸರ್ಕಾರ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ, ಸೂಜಿ, ಸಿರಿಂಜ್‌ ಪೂರೈಕೆ ಮಾಡುತ್ತದೆ. ಜತೆಗೆ ಬಳಕೆ ಮಾಡಿದ ಬಳಿಕ, ಅವುಗಳನ್ನು ಏನು ಮಾಡಬೇಕು ಎನ್ನುವುದನ್ನು ನಿಯಮಗಳಲ್ಲಿ ತಿಳಿಸಿದೆ. ಆದರೆ ಬಹುತೇಕ ಆಸ್ಪತ್ರೆಗಳು ತಾವು ಬಳಸಿದ ಸೂಜಿ, ಸಿರಿಂಜ್‌ಗಳು ಹಾಗೂ ಅವಧಿ ಮುಗಿದ ಔಷಧಿ, ಮಾತ್ರೆಗಳನ್ನು ರಸ್ತೆಗಳ ಪಕ್ಕದಲ್ಲೇ ಬಿಸಾಡುತ್ತಿವೆ.

Advertisement

ನಾಮಕೇ ವಾಸ್ತೆ ವಿಲೇವಾರಿ: ಬಳಸಿ ಬಿಡುವ ಔಷಧಿಗಳು, ಅವ ಧಿ ಮುಗಿದ ಔಷಧಿಗಳು, ಸೂಜಿ, ಸಿರಿಂಜ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲಿಗೆ ಅದಕ್ಕಾಗಿಯೇ ಇರುವ ವಿಲೇವಾರಿ ಘಟಕ ವಾಹನದಲ್ಲಿ ತುಂಬಿ ಕಳುಹಿಸಬೇಕು. ಆದರೆ ಈ ವಾಹನ ಕೇವಲ ವಾನಕೇವಾಸ್ತೆ ಎನ್ನುವಂತಾಗಿದೆ.

ವರ್ಷದಲ್ಲಿ ಕೇವಲ ಎರಡ್ಮೂರು ಬಾರಿ ಬಂದು ಹೋಗುವ ವಿಲೇವಾರಿ ವಾಹನ ಸಮಪರ್ಕವಾಗಿ ವಿಲೇವಾರಿ ಮಾಡದೇ ಹೋಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ರಸ್ತೆಗಳ ಪಕ್ಕದಲ್ಲೇ ಈ ಬಳಸಿದ ಸಿರಿಂಜ್‌, ಸೂಜಿ ಹಾಗೂ ಅವಧಿ ಮುಗಿದ ಮಾತ್ರೆಗಳನ್ನು ಚೆಲ್ಲಿ ಹೋಗುತ್ತಿರುವುದರಿಂದ ಪ್ರಾಣಿ, ಪಕ್ಷಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಪಾದಚಾರಿಗಳು ಇವುಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದು, ಕೆಲವರಿಗೆ ಸೂಚಿಗಳು ಚುಚ್ಚಿ ಗಾಯಗಳಾದ ಉದಾಹರಣೆಗಳಿವೆ.

ಎಚ್ಚೆತ್ತುಕೊಳ್ಳಲಿ ಆರೋಗ್ಯ ಇಲಾಖೆ: ಅಪಾಯ ಸಂಭವಿಸುವ ಮುನ್ನವೇ ಆರೋಗ್ಯ ಇಲಾಖೆ ಎಚ್ಚೆತ್ತು, ಸಮಪರ್ಕವಾಗಿ ತ್ಯಾಜ್ಯ ವಿಲೇವಾರಿ ಮಾಡಿಸಬೇಕು. ಇಲ್ಲದಿದ್ದರೆ ಆಗುವ ಅನಾಹುತಕ್ಕೆ ಆರೋಗ್ಯ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next