Advertisement

ನಿಷೇಧದ ಹೊರತಾಗಿಯೂ ಪಟಾಕಿ ಹಂಚಿದ ಬಿಜೆಪಿ ವಕ್ತಾರ

04:00 PM Oct 18, 2017 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿರುವ ಹೊರತಾಗಿಯೂ ಬಿಜೆಪಿಯ ದೆಹಲಿ ವಕ್ತಾರ ತೇಜೀಂದರ್‌ ಬಗ್ಗಾ ಅವರು ಕೊಳಗೇರಿ ಮಕ್ಕಳಿಗೆ ಪಟಾಕಿ ವಿತರಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಪಟಾಕಿ ವಿತರಿಸುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ.

Advertisement

ನಿಷೇಧ ಆದೇಶ ಬಂದಾಗಲೇ, ತಾವು 50 ಸಾವಿರ ರೂ.ಗಳ ಪಟಾಕಿ ಖರೀದಿಸಿ ಮಕ್ಕಳಿಗೆ ಹಂಚುತ್ತೇನೆ ಎಂದು ಬಗ್ಗಾ ಘೋಷಿಸಿಕೊಂಡಿದ್ದರು. ಇದೀಗ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಅವರು, “ಸುಪ್ರೀಂ ಕೋರ್ಟ್‌ ಪಟಾಕಿ ಮಾರಾಟ ನಿಷೇಧಿಸಿದೆಯೇ ಹೊರತು, ಸಿಡಿಸುವುದನ್ನಲ್ಲ. ನಾನು ಪಟಾಕಿಯನ್ನು ದೆಹಲಿಯ ಹೊರಗಿಂದ ಖರೀದಿಸಿ ಹಂಚಿದ್ದೇನೆ’ ಎಂದಿದ್ದಾರೆ. ಇನ್ನೊಂದೆಡೆ, ಪಟಾಕಿ ನಿಷೇಧಕ್ಕೆ ಪ್ರತಿಭಟನಾರ್ಥವಾಗಿ ಸುಪ್ರೀಂಕೋರ್ಟ್‌ ಮುಂದೆಯೇ ಕಿಡಿಗೇಡಿಗಳು ಪಟಾಕಿ ಸಿಡಿಸಿದ್ದು, 14 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಡೀಸೆಲ್‌ ಜನರೇಟರ್‌ ನಿಷೇಧ: ಇದೇ ವೇಳೆ, ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಕಾರಣ ಡೀಸೆಲ್‌ ಜನರೇಟರ್‌ ಬಳಕೆ ಮೇಲೂ ನಿಷೇಧ ಹೇರಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಆದೇಶ ಹೊರಡಿಸಿದ್ದು, ಬದಾ ರ್ಪುರ್‌ ಉಷ್ಣ ವಿದ್ಯುತ್‌ ಸ್ಥಾವರ ವನ್ನು ಮುಚ್ಚುವಂತೆಯೂ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next