Advertisement

ಕಣ್ಣೂರು, ವಯನಾಡ್‌ನ‌ಲ್ಲಿ ಆಫ್ರಿಕನ್‌ ಹಂದಿಜ್ವರ ದೃಢ

10:22 PM Aug 01, 2022 | Team Udayavani |

ಕಣ್ಣೂರು/ನವದೆಹಲಿ: ಮಂಕಿಪಾಕ್ಸ್‌ನಿಂದ ವ್ಯಕ್ತಿ ದೃಢಪಟ್ಟ ಬೆನ್ನಲ್ಲಿಯೇ ಕೇರಳದಲ್ಲಿ ಮತ್ತೆ ಹಂದಿಜ್ವರದ ಪ್ರಕರಣಗಳು ಪತ್ತೆಯಾಗಿವೆ.

Advertisement

ಹೊಸತಾಗಿ ವಯನಾಡ್‌ ಜಿಲ್ಲೆಯಲ್ಲಿ ಮತ್ತು ಕಣ್ಣೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೇಸುಗಳು ಖಚಿತಪಟ್ಟಿವೆ. ವಾರದ ಹಿಂದಷ್ಟೇ ವಯನಾಡ್‌ ಜಿಲ್ಲೆಯಲ್ಲಿ ಹಂದಿಜ್ವರದ ಕಾರಣ ಮುಂದಿಟ್ಟುಕೊಂಡು 300ಕ್ಕೂ ಅಧಿಕ ಹಂದಿಗಳನ್ನು ಕೊಲ್ಲಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತೀರ್ಮಾನಿಸಿವೆ ಮತ್ತು ಎರಡೂ ಜಿಲ್ಲಾಡಳಿತಗಳು ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿವೆ.

ಈ ನಡುವೆ, ದೇಶದಲ್ಲಿ ಮಂಕಿಪಾಕ್ಸ್‌ನ ಐದು ಕೇಸುಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್‌ ನೇತೃತ್ವದಲ್ಲಿ ಉನ್ನತಮಟ್ಟದ ಟಾಸ್ಕ್ಫೋರ್ಸ್‌ ಅನ್ನು ಕೇಂದ್ರ ಸರ್ಕಾರ ರಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next