Advertisement

ಕೋವಿಡ್ ಹೊಡೆತಕ್ಕೆ ಮಳೆ-ಗಾಳಿ ಬರೆ

11:40 AM Apr 20, 2020 | Naveen |

ಅಫಜಲಪುರ: ಕೋವಿಡ್ ಕಾರಣದಿಂದ ಎಲ್ಲೆಡೆ ಲಾಕ್‌ಡೌನ್‌ ಘೋಷಣೆಯಾಗಿದ್ದು ಒಂದೆಡೆಯಾದರೆ ಬಿರುಗಾಳಿ ಸಹಿತ ಮಳೆ ಬಂದು ಪಪ್ಪಾಯಿ ಹಾಗೂ ದ್ರಾಕ್ಷಿ ಬೆಳೆ ಹಾಳಾಗಿದ್ದು ರೈತರಿಗೆ ಉಂಟಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಪಟ್ಟಣದ ಹೊರವಲಯದಲ್ಲಿರುವ ರೈತ ಶರಣು ತಾವರಖೇಡ ಅವರಿಗೆ ಸೇರಿದ ಐದು ಎಕರೆ ಪಪ್ಪಾಯಿ ಬಿರುಗಾಳಿಗೆ ಮುರಿದು ಹಣ್ಣುಗಳೆಲ್ಲ ನೆಲದ ಪಾಲಾಗಿವೆ. ಇನ್ನೊಂದೆಡೆ ಪೀರಪ್ಪ ಮ್ಯಾಕೇರಿ ಅವರಿಗೆ ಸೇರಿದ ಎರಡು ಎಕರೆ ಜಮೀನಲ್ಲಿ ಬೆಳೆದ ದ್ರಾಕ್ಷಿ ಮಣ್ಣುಪಾಲಾಗಿದೆ. ಸಾಲ ಮಾಡಿ ಗೊಬ್ಬರ ಹಾಕಿ ಬೆಳೆಸಿದ್ದ ಪಪ್ಪಾಯಿ, ದ್ರಾಕ್ಷಿ ಕಟಾವಿಗೆ ಬಂದ ಸಮಯದಲ್ಲಿ ಬಿರುಗಾಳಿ ಹೊಡೆತಕ್ಕೆ ಸಿಲುಕಿನ ನೆಲಪಾಲಾಗಿದ್ದನ್ನು ಕಂಡು ರೈತರು ಕಣ್ಣೀರಿಟ್ಟಿದ್ದಾರೆ.

ಎಂದಿನಂತೆ ಮಾರುಕಟ್ಟೆ ವ್ಯವಸ್ಥೆ ಇದ್ದರೆ ಹಣ್ಣು ಮಾರಾಟ ಮಾಡಿ ಲಕ್ಷಾಂತರ ಲಾಭ ಪಡೆಯುವ ಆಸೆಯಲ್ಲಿದ್ದವರಿಗೆ ಈಗ ಮಾಡಿಕೊಂಡ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ರೈತರ ಜೀವನ ಮೂರಾಬಟ್ಟೆ ಆಗಿದ್ದು, ಸಂಬಂಧಪಟ್ಟವರು ರೈತರ ಕಷ್ಟಕ್ಕೆ ಸ್ಪಂದಿಸಿ, ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next