Advertisement

ಆದ್ಯಪಾಡಿ, ಶಂಭೂರು ಡ್ಯಾಂನಿಂದ ಹೂಳೆತ್ತುವುದಕ್ಕೆ ತಡೆ

11:41 PM Mar 30, 2023 | Team Udayavani |

ಮಂಗಳೂರು: ಜಿಲ್ಲೆಯ ಎರಡು ಅಣೆಕಟ್ಟುಗಳಿಂದ ಡ್ರೆಜ್ಜಿಂಗ್‌ ನಡೆಸಿ ಮರಳು ತೆಗೆಯುವುದಕ್ಕೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಡೆಯೊಡ್ಡಿದೆ.

Advertisement

ಆದ್ಯಪಾಡಿ ಮತ್ತು ಶಂಭೂರು ಅಣೆಕಟ್ಟೆಗಳ ಹಿನ್ನೀರಿನಿಂದ ಹೂಳೆತ್ತುವ, ಆ ಮೂಲಕ ಸಿಕ್ಕಿದ ಮರಳನ್ನು ಮಾರಾಟ ಮಾಡುವುದಕ್ಕೆ ಈ ಹಿಂದೆ ಕಾರ್ಯಾದೇಶ ನೀಡಲಾಗಿತ್ತು. ಕರ್ನಾಟಕ ರಾಜ್ಯ ಖನಿಜ ನಿ.ಲಿ. ನಿಂದ ದಕ್ಷಿಣ ಕನ್ನಡ ಜಿಲ್ಲಾ ಮರಳು ನಿಗಾ ಸಮಿತಿಗೆ ಕಾರ್ಯಾದೇಶ ಹೊರಡಿಸಲಾಗಿತ್ತು. ಈ ಪ್ರಕ್ರಿಯೆಯೇ 2006ರ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಧಿಕರಣ ತಿಳಿಸಿದೆ.

ಫಲ್ಗುಣಿ (ಗುರುಪುರ) ಮತ್ತು ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನ ಹಿನ್ನೀರಿನಿಂದ 14,51,680 ಟನ್‌ ಮರಳನ್ನು ತೆಗೆಯಲು ಮರಳು ಮೇಲ್ವಿಚಾರಣಾ ಸಮಿತಿಯು ಈ ಹಿಂದೆ ಅನುಮತಿಯನ್ನು ನೀಡಿತ್ತು. ಆದರೆ ಪರಿಸರ ಅನುಮೋದನೆ (ಇಸಿ) ಪಡೆಯುವಲ್ಲಿ ಇಲಾಖೆ ವಿಫಲವಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಎನ್‌ಜಿಟಿ ನಡೆಸಿತ್ತು. ಇಸಿ ಪಡೆದುಕೊಳ್ಳದೆ ಮರಳು ತಗೆಯಲು ಆದೇಶ ನೀಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ಕುರಿತು ಗಣಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಈ ಎರಡೂ ಅಣೆಕಟ್ಟಿನಿಂದ ಮರಳು ತೆಗೆಯುವುದನ್ನು ಕಳೆದ ಒಂದು ತಿಂಗಳ ಹಿಂದೆಯೇ ನಿಲ್ಲಿಸಲಾಗಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next