Advertisement

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

08:50 PM Oct 18, 2021 | Team Udayavani |

ಬೆಂಗಳೂರು: ಸಿಂಧಗಿ ಹಾಗೂ ಹಾನಗಲ್‌ ಉಪ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದು, ಇದರಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

Advertisement

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ದಿನ ಸಿಂಧಗಿ ಹಾಗೂ ಎರಡು ದಿನ ಹಾನಗಲ್‌ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಪಕ್ಷ ಅಪೇಕ್ಷೆ ಪಟ್ಟರೆ ಎರಡನೇ ಹಂತದ ಪ್ರಚಾರಕ್ಕೂ ಹೋಗುತ್ತೇನೆ.

ಅಗತ್ಯ ಬಿದ್ದರೆ ಸಿಎಂ ಜೊತೆಗೂ ಪ್ರಚಾರ ಮಾಡುತ್ತೇನೆ. ಆದರೆ ಪ್ರತ್ಯೇಕ ಪ್ರಚಾರದಿಂದ ಹೆಚ್ಚಿನ ಲಾಭ ಇದೆ. ಹಾಗಾಗಿ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತೇನೆ.

ಪಕ್ಷ ಬಯಸಿದರೆ ಇನ್ನಷ್ಟು ದಿನ ಪ್ರಚಾರಕ್ಕೆ ಸಿದ್ಧ ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ:ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next