Advertisement

ಮೌಲ್ಯ ಸಾರುವ ಸಿನಿಮಾ ತೋತಾಪುರಿ; ನಾಯಕಿ ಅದಿತಿ ಮಾತು

04:35 PM Sep 20, 2022 | Team Udayavani |

ಅದಿತಿ ಪ್ರಭುದೇವ ನಾಯಕಿ ಯಾಗಿರುವ “ತೋತಾಪುರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.30ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್‌ ಹಾಗೂ ಹಾಡಿನಲ್ಲಿ ಅದಿತಿ ಮಿಂಚಿದ್ದು, ಸಿನಿಮಾ ಮೇಲೆ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ. ಟ್ರೇಲರ್‌ ನಲ್ಲಿ ಒಂದಷ್ಟು ಡಬಲ್‌ ಮೀನಿಂಗ್‌ ಡೈಲಾಗ್‌ಗಳಿದ್ದರೂ, ಇಡೀ ಸಿನಿಮಾ ಅದರಿಂದ ಹೊರತಾಗಿ ಭಿನ್ನವಾಗಿ ನಿಲ್ಲುತ್ತದೆ ಎನ್ನುವುದು ಅದಿತಿ ಮಾತು.

Advertisement

ಈ ಚಿತ್ರದಲ್ಲಿ ನಟಿಸಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ. ಚಿತ್ರದಲ್ಲಿ ನಿರ್ದೇಶಕರು ಚೇಷ್ಟೇ, ತುಂಟತನ ಮಾಡಿದ್ದರೂ, ಅಂತಿಮವಾಗಿ ಇದೊಂದು ಅದ್ಭುತ ಮೌಲ್ಯ ಸಾರುವ ಸಿನಿಮಾವಾಗಿ ಎಲ್ಲರ ಮನಸ್ಸು ಗೆಲ್ಲುತ್ತದೆ. ನನಗೆ ಈ ಸಿನಿಮಾದಲ್ಲಿ ನಟಿಸಿರೋದು ಒಂದು ಒಳ್ಳೆಯ ಅನುಭವ. ಇಡೀ ತಂಡವೇ ಅದ್ಭುತವಾಗಿದೆ. ಜಗ್ಗೇಶ್‌ ಅವರ ಕಾಮಿಡಿ ಟೈಮಿಂಗ್‌ ಅದ್ಭುತ. ಒಂದೊಳ್ಳೆ ತಂಡದ ಭಾಗವಾಗಿರುವುದಕ್ಕೆ ಖುಷಿ ಇದೆ’ ಎನ್ನುವುದು ಅದಿತಿ ಮಾತು

ಅದಿತಿ ಹಾಗೂ ಜಗ್ಗೇಶ್‌ ಅವರು ಕಾಣಿಸಿಕೊಂಡಿರುವ “ಬಾಗ್ಲು ತೆಗಿ ಮೇರಿ ಜಾನ್‌’ ಹಾಡು ಸೂಪರ್‌ ಹಿಟ್‌ ಆಗಿದೆ. ಇದೇ ರೀತಿ ಸಿನಿಮಾ ಕೂಡಾ ದೊಡ್ಡ ಹಿಟ್‌ ಆಗುತ್ತದೆ ಎಂಬ ನಂಬಿಕೆ ಅದಿತಿ ಅವರಿಗಿದೆ.

ಇನ್ನು, ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಕೆ.ಎ.ಸುರೇಶ್‌, ತೋತಾಪುರಿ ಸಿನಿಮಾವನ್ನು ಮೋನಿಫಿಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ವಿಜಯ ಪ್ರಸಾದ್‌ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next