Advertisement

“ಹುಚ್ಚು ಮೋದಿ” ಹೇಳಿಕೆ ಸಮರ್ಥಿಸಿದ ಅಧೀರ್‌

12:15 AM May 25, 2023 | Team Udayavani |

ಕೋಲ್ಕತಾ: 2,000 ಮುಖಬೆಲೆಯ ನೋಟುಗಳು ಹಿಂಪಡೆದ ವಿಷಯವಾಗಿ “ಹುಚ್ಚು ಮೋದಿ” ಎಂದು ನೀಡಿದ್ದ ಹೇಳಿಕೆಯನ್ನು ಪಶ್ಚಿಮ ಬಂಗಾಲ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ಚೌಧರಿ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಅವರ ಬಗ್ಗೆ ದೇಶದ ನಾಗರಿಕರಲ್ಲಿ ಹತಾಶೆ ಹೆಚ್ಚುತ್ತಿದೆ. ಜನರು ಮೋದಿ ಅವರನ್ನು ಹುಚ್ಚು (ಪಗ್ಲಾ) ಮೋದಿ ಎಂದು ಕರೆಯುತ್ತಿದ್ದಾರೆ. ಸಾರ್ವಜನಿಕರ ಭಾವನೆಗಳು ಮೋದಿ ವಿರುದ್ಧ ಇವೆ’ ಎಂದು ಹೇಳಿದ್ದಾರೆ. ಅಧೀರ್‌ ಅವರ ಹೇಳಿಕೆಗೆ ಪಶ್ಚಿಮ ಬಂಗಾಲ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮಾªರ್‌ ಕಿಡಿಕಾರಿದ್ದಾರೆ. “ಪದೇಪದೆ ಅಧೀರ್‌ ಅವರು ಪ್ರಧಾನಿ ಮೋದಿ ಅವರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುತ್ತಿದ್ದಾರೆ. ಅವರು ಚಾಳಿ ಬಿದ್ದ ಅಪರಾಧಿಯಾಗಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಅವರು ಈ ಹೇಳಿ ಬಗ್ಗೆ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next