Advertisement

Alcohol: ಮದ್ಯ ಸೇವನೆ ಚಟ: ಇಬ್ಬರ ಆತ್ಮಹತ್ಯೆ

08:17 PM Aug 24, 2023 | Team Udayavani |

ಕುಂದಾಪುರ: ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಇಬ್ಬರು ಖನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಕಾವ್ರಾಡಿ ಮುಳ್ಳುಗುಡ್ಡೆ ನಿವಾಸಿ ಮಹೇಶ್‌ (36) ಅವರು ಪಕ್ಕದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ಜಡ್ಕಲ್‌ ಗ್ರಾಮ ಬೀಸಿನಪಾರೆ ತೆಂಗಿನಪಿಳ್ಳೆ ನಿವಾಸಿ ಎನ್‌. ಎಮ್‌. ಜೋಸೆಫ್‌ ಯಾನೆ ಶಾಜು(53) ಅವರ ಮೃತದೇಹ ಹಟ್ಟಿಯಂಗಡಿ ಗ್ರಾಮದ ಪಾರ್ತಿಕಟ್ಟೆ ಬಳಿಯ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಪ್ರಕರಣ ದಾಖಲಾಗಿದೆ. ಟ್ರಾಕ್‌ನಲ್ಲಿ ರೈಲು ಹರಿದು ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಮದ್ಯ ಮಾರಾಟ: ಆರೋಪಿಗೆ ಜಾಮೀನು
ಕುಂದಾಪುರ: ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿ ನೆಲ್ಲಿಕಟ್ಟೆಯ ನಾಗರಾಜ ಎಂಬವರಿಗೆ ಕುಂದಾಪುರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ನಾಗರಾಜ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

Advertisement

ಆರೋಪಿ ಪರ ಕುಂದಾಪುರದ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next