Advertisement
ಅದಾನಿ ಯುಪಿಸಿಎಲ್ ಯೋಜನೆ ವಿಸ್ತರಣೆ ಸಂದರ್ಭದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಯೋಜನಾ ಪ್ರದೇಶದೊಳಗಿನ ಸುಮಾರು 10 ಎಕ್ರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ಸಿಮೆಂಟ್ ಕಂಪೆನಿಯ ಮೂಲಕ ಯುಪಿಸಿಎಲ್ ವಿದ್ಯುತ್ ಸ್ಥಾವರದಲ್ಲಿನ ಶೇ. ನೂರಕ್ಕೆ ನೂರರಷ್ಟು ಹಾರುಬೂದಿಯನ್ನು ಸಿಮೆಂಟ್ ಉತ್ಪಾದನೆಗಾಗಿ ಬಳಸಿಕೊಳ್ಳಲಾಗುವುದು. ಈ ಯೋಜನೆಯಿಂದಾಗಿ ಸುಮಾರು 500ರಷ್ಟು ಸ್ಥಳೀಯ ಯುವಕ ಯುವತಿ ಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು ವಾರ್ಷಿಕ 2 ಮಿಲಿಯ ಟನ್ ಸಿಮೆಂಟ್ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಲಾಗಿದೆ ಎಂದೂ ಕಿಶೋರ್ ಆಳ್ವ ವಿವರಿಸಿದ್ದಾರೆ.
ಈ ಯೋಜನೆಯ ಸಗಟು ಪದಾರ್ಥಗಳಾದ “ಕ್ಲಿಂಕರ್’ ಈಗಾಗಲೇ ಸ್ಥಾವರದೊಳಕ್ಕಿರುವ ರೈಲು ಮಾರ್ಗವಾಗಿ ಸ್ಥಾವರಕ್ಕೆ ಬರಲಿದ್ದು “ಜಿಪ್ಸಮ್’ ಯುಪಿಸಿಎಲ್ನಲ್ಲಿ ಅಳವಡಿಸಲಾಗಿರುವ ಎಫ್ಜಿಡಿಯಿಂದಲೇ ಲಭ್ಯವಾಗಲಿದೆ ಎಂದೂ ಕಿಶೋರ್ ಆಳ್ವ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಯುಪಿಸಿಎಲ್ ಎಜಿಎಂ ಗಿರೀಶ್ನಾವಡ, ಹಿರಿಯ ಪ್ರಬಂಧಕ ರವಿ ಜೀರೆ, ತೋನ್ಸೆ ಜಯಕೃಷ್ಣ ಶೆಟ್ಟಿ, ಪೈಯ್ನಾರು ಶಿವರಾಮ ಶೆಟ್ಟಿ, ಕೊಳಚೂರುಗುತ್ತು ಜಗನ್ನಾಥ ಶೆಟ್ಟಿ, ತೋನ್ಸೆ ದಿವಾಕರ ಶೆಟ್ಟಿ, ತೋನ್ಸೆ ಮನಕರ್ ಶೆಟ್ಟಿ ಉಪಸ್ಥಿತರಿದ್ದರು.
Related Articles
Advertisement
– ಆರಾಮ