Advertisement

ಡಿ. 5-26: ಅದಮಾರು ಪರ್ಯಾಯ “ವಿಶ್ವಾರ್ಪಣಮ್‌’

11:08 PM Dec 04, 2021 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಪ್ರಥಮ ಪರ್ಯಾಯ ಪೂಜಾದೀಕ್ಷೆಯ ಮಂಗಲೋತ್ಸವದ ಸರದಿ ಕಾರ್ಯಕ್ರಮ “ವಿಶ್ವಾರ್ಪಣಮ್‌’ ಡಿ. 5ರಿಂದ 26ರ ವರೆಗೆ ನಡೆಯಲಿದೆ.

Advertisement

ಡಿ. 5ರ ಸಂಜೆ 4ಕ್ಕೆ ಅದಮಾರು ಮಠದ ಉಭಯ ಶ್ರೀಪಾದರು “ವಿಶ್ವಾರ್ಪಣಮ್‌’ಗೆ ಚಾಲನೆ ನೀಡಲಿದ್ದಾರೆ. ಪ್ರತೀ ದಿನ ಸಂಜೆ 4ರಿಂದ ವಿವಿಧ ಮಠಾಧೀಶರಿಂದ ಆಶೀರ್ವಚನ ಮತ್ತು ಚಿಂತಕರಿಂದ ಉಪನ್ಯಾಸ ನಡೆಯಲಿದೆ.

ಮಠಾಧೀಶರ ಆಶೀರ್ವಚನ:

ಡಿ. 5- ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, ಡಿ. 6-ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಡಿ. 7-ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾ ನಂದ ಸ್ವಾಮೀಜಿ, ಡಿ.  8-ಎಡನೀರು ಮಠದ ಶ್ರೀಸಚ್ಚಿದಾನಂದಭಾರತೀ ಸ್ವಾಮೀಜಿ, ಡಿ. 9- ಮೂಡಬಿದಿರೆ ಜೈನಮಠದ ಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಡಿ. 10-ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ಡಿ. 11-ಆನೆಗುಂದಿ ಮಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಡಿ. 13-ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಿ. 14-ಕೊಲ್ಹಾಪುರದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಡಿ. 16-ಕರಿಂಜೆ ಮಠದ ಶ್ರೀಮುಕ್ತಾನಂದ ಸ್ವಾಮೀಜಿ, ಡಿ. 17-ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಿ. 18- ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು, ಡಿ. 19-ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಡಿ. 20-ಸ್ವರ್ಣವಲ್ಲೀ ಮಠದ ಶ್ರೀಗಂಗಾಧ ರೇಂದ್ರ ಸರಸ್ವತಿ ಸ್ವಾಮೀಜಿ, ಡಿ. 21- ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಡಿ. 22- ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮ ಹಂಸ ಸ್ವಾಮೀಜಿ, ಡಿ. 23- ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಂಗಳೂರು ಶಾಖೆಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಡಿ. 24-ಬಾಳೆಗಾರು ಮಠದ ಶ್ರೀ ರಘು ಭೂಷಣತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಡಿ. 25- ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಡಿ. 26-ಅಷ್ಟ ಮಠಾಧೀಶರು.

ಚಿಂತಕರ ದಂಡು:

Advertisement

ಡಿ. 5ರಂದು ಕಿರುತೆರೆ ನಟ ಎಸ್‌.ಎನ್‌. ಸೇತುರಾಮ್‌, ಡಿ. 6- ಚಕ್ರವರ್ತಿ ಸೂಲಿಬೆಲೆ, ಡಿ. 7- ರೋಹಿತ್‌ ಚಕ್ರತೀರ್ಥ, ಡಿ. 8-ಮಾಜಿ ಸಚಿವ ಸುಬ್ರಹ್ಮಣ್ಯನ್‌ ಸ್ವಾಮಿ, ಡಿ. 9- ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ, ಡಿ. 10- ಯಕ್ಷಗಾನ ಪ್ರಸಂಗಕರ್ತ ಪ್ರೊ| ಪವನ್‌ ಕಿರಣಕೆರೆ, ಡಿ. 11-ಪತ್ರಕರ್ತ ರಂಗನಾಥ ಭಾರದ್ವಾಜ್‌, ಥಟ್‌ ಅಂತ ಹೇಳಿ ಖ್ಯಾತಿಯ ಡಾ| ನಾ. ಸೋಮೇಶ್ವರ, ಡಿ. 12-ಸಂಸ್ಕೃತಿ ಚಿಂತಕಿ ಡಾ| ವಿ.ಬಿ. ಆರತಿ, ಡಿ. 13-ಸಾಮಾಜಿಕ ಕಾರ್ಯಕರ್ತ ರಾಬರ್ಟ್‌ ರೊಸಾರಿಯೋ ಕಿನ್ನಿಗೋಳಿ, ಡಿ. 14- ಎಂ. ವಿಜಯರಾಮ, ಡಿ. 15-ಬಿಜೆಪಿ ನಾಯಕ ಬಿ.ಎಲ್‌. ಸಂತೋಷ್‌, ಡಿ. 16- ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್‌, ಹಿರಿಯ ಚಿತ್ರನಟ ರಮೇಶ ಭಟ್‌, ದೈವಾರಾಧಕ ಕುಮಾರ ಪಂಬದ, ಡಿ. 17-ಆರೆಸ್ಸೆಸ್‌ ಕ್ಷೇತ್ರೀಯ ಕಾರ್ಯವಾಹ ಎನ್‌. ತಿಪ್ಪೇಸ್ವಾಮಿ, ಡಿ. 18-ಸಂಸ್ಕೃತಿ ಚಿಂತಕಿ ಸಹನಾ ವಿಜಯಕುಮಾರ್‌, ಡಿ. 19-ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸಾಯಿ ದೀಪಕ್‌, ಬೆಂಗಳೂರಿನ ನ್ಯಾಯವಾದಿ ಶ್ರೀಹರಿ ಕುತ್ಸ, ಡಿ. 20-ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಡಿ. 21- ಅಂಕಣಕಾರ ಟಿ. ದೇವಿದಾಸ್‌, ಡಿ. 22-ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ, ಡಿ. 24-ಭಾಷಾತಜ್ಞ ಚ.ಮೂ. ಕೃಷ್ಣಶಾಸ್ತ್ರಿ, ಡಿ. 25-ಸಂಸದ ತೇಜಸ್ವೀ ಸೂರ್ಯ.

ವಿಶೇಷ ಕಾರ್ಯಕ್ರಮ:

ಡಿ. 11ರಂದು ರಾಷ್ಟ್ರೀಯ ಕರಕುಶಲ ವಸ್ತುಗಳ ಪ್ರದರ್ಶನ, ಡಿ. 12ರಿಂದ 14ರ ವರೆಗೆ ಕೃಷಿಕ, ಗೋ ಉತ್ಪನ್ನ ತಯಾರಕರ ಸಮ್ಮೇಳನ, ಈ ಮೂರೂ ದಿನ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ನಾಡಿ ಚಿಕಿತ್ಸಾ ಶಿಬಿರ, ಡಿ. 19ರ ಬೆಳಗ್ಗೆ 8.30ಕ್ಕೆ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಕಲಾವಿದರು, ಜನಪ್ರತಿನಿಧಿಗಳು :

ಕೇಂದ್ರದ ಸಚಿವ ಪ್ರಹ್ಲಾದ ಜೋಶಿ, ರಾಜಸ್ಥಾನದ ಡಿಸಿಎಂ ಸಚಿನ್‌ ಪೈಲಟ್‌, ಕರ್ನಾಟಕದ ಸಚಿವರಾದ ಎ. ಶಿವರಾಮ ಹೆಬ್ಟಾರ್‌, ಪ್ರಭು ಚವ್ಹಾಣ್‌, ವಿ. ಸುನಿಲ್‌ ಕುಮಾರ್‌ ಮೊದಲಾದವರು ಪಾಲ್ಗೊಳ್ಳುವರು. ನಿತ್ಯ ಸಂಜೆ 7ರಿಂದ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವೈದ್ಯಕೀಯ, ನಾಟಿ ವೈದ್ಯ, ಸಾಹಿತ್ಯ, ಕಲೆ, ವಿದ್ವತ್‌, ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಈ ದಿನಗಳಲ್ಲಿ ಸಮ್ಮಾನಿಸಲಾಗುವುದು.

 

Advertisement

Udayavani is now on Telegram. Click here to join our channel and stay updated with the latest news.

Next