Advertisement

ತನ್ನ ಬಾಡಿಗೆದಾರಿಂದ ಸದ್ಯ ಬಾಡಿಗೆ ಪಡೆದುಕೊಳ್ಳದಿರಲು ನಟಿ ಅಮೃತಾ ರಾವ್ ನಿರ್ಧಾರ

12:59 AM Jun 24, 2020 | Hari Prasad |

ಮುಂಬಯಿ: ಕೋವಿಡ್‌-19ನಿಂದ ದಿನ ಕೂಲಿ ಕಾರ್ಮಿಕರಿಂದ ಹಿಡಿದು ವಲಸೆ ಕಾರ್ಮಿಕರ ಬದುಕು ಅಕ್ಷರಶಃ ಅತಂತ್ರವಾಗಿದೆ.

Advertisement

ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಕೆಲವು ನಿಬಂಧನೆಗಳು ಈ ವರ್ಗಗಳ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಾಡಿಗೆ ಮನೆಗಳಲ್ಲಿ  ವಾಸಿಸುವವರು ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿನ್ನಲೆಯಲ್ಲಿಯೇ ಸೋಂಕಿನಿಂದ ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ನನ್ನ ವಸತಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಂದ ನಾನು ಕೆಲವು ತಿಂಗಳ ಕಾಲ ಬಾಡಿಗೆ ಕೇಳದಿರಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್‌ ನಟಿ ಅಮೃತಾ ರಾವ್‌ ತಿಳಿಸಿದ್ದಾರೆ.

ಹೌದು ಮುಂಬಯಿ ನಗರದಲ್ಲಿ ಅನೇಕ ಕಡೆ ಅಪಾರ್ಟ್‌ಮೆಂಟ್‌ ಸೇರಿ ಇತರೆ ಆಸ್ತಿಗಳನ್ನು ಹೊಂದಿದ್ದು, ಬಾಲಿವುಡ್‌ ನಟಿ ಅಮೃತಾ ರಾವ್‌  ತನ್ನ ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಬಾಡಿಗೆದಾರಿಂದ ಬಾಡಿಗೆ ಹಣವನ್ನು ಪಡೆಯುವುದನ್ನು ಕೆಲವು ತಿಂಗಳ ಕಾಲ ಮುಂದೂಡಲು ನಿರ್ಧರಿಸಿದ್ದಾರೆ.

ಈ ಕುರಿತು ಸ್ವತ: ನಟಿ ಅಮೃತಾ ರಾವ್‌ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ  ಬರೆದುಕೊಂಡಿದ್ದು, ನನ್ನ ಅಪಾರ್ಟ್‌ಮೆಂಟ್‌ನಲ್ಲಿರುವ ಸಾಕಷ್ಟು ಬಾಡಿಗೆದಾರರು ಸಿನಿಮಾದಲ್ಲಿ  ಪ್ರತಿದಿನದ ಕೂಲಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಇತರರಂತೆ ತಿಂಗಳ ಸಂಬಳ ದೊರೆಯುವುದಿಲ್ಲ.

Advertisement

ಈ ಸೋಂಕಿನಿಂದಾಗಿ ಇವರೆಲ್ಲರ ಜೀವನ ಅತಂತ್ರವಾಗಿದ್ದು, ಎಲ್ಲರೂ ತಮ್ಮ ಕುಟುಂಬಗಳೊಂದಿಗೆ ಊರಿಗೆ ತೆರಳುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next