Advertisement

ಸಿಎಂ ನಿವಾಸಕ್ಕೆ ನಟ ಸುದೀಪ್‌; ಕೆಸಿಸಿ ಉದ್ಘಾಟನೆಗೆ ಆಹ್ವಾನ

09:42 AM Apr 05, 2018 | |

ಬೆಂಗಳೂರು: ಕಿಚ್ಚ ಸುದೀಪ್‌  ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಯಾಗಿ ಮಾತುಕತೆ ನಡೆಸಿರುವೆದು  ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. .

Advertisement

ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿರುವ ಸುದೀಪ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಅವರು ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನೆಗೆ ಆಹ್ವಾನಿಸಲು ಆಗಮಿಸಿದ್ದರೆ ಹೊರತು ಬೇರೆ ರಾಜಕೀಯ ಕಾರಣಕ್ಕಲ್ಲ ಎನ್ನುವ ವಿಚಾರ ಸ್ಪಷ್ಟವಾಗಿದೆ. 

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ  ಮಾತುಕತೆ ನಡೆಸಿ  ಕುತೂಹಲ ಕೆರಳಿಸಿದ್ದ ಬೆನ್ನಲ್ಲೇ  ನಟ ಸುದೀಪ್‌  ಸಿಎಂ ಭೇಟಿಯಾದುದು ಭಾರೀ ಸುದ್ದಿಗೆ ಗ್ರಾಸವಾಯಿತು. 

ಕೆಸಿಸಿ ಪಂದ್ಯಾವಳಿ ಎಪ್ರಿಲ್‌ 7 ಮತ್ತು 8 ರಂದು ನಡೆಯಲಿದ್ದುವಿವಿಧ ಗಣ್ಯರಿಗೆ ಆಹ್ವಾನಿಸುವಲ್ಲಿ ಸುದೀಪ್‌ ನಿರತರಾಗಿದ್ದಾರೆ.

ಸಿದ್ದರಾಮಯ್ಯ ಅವರು ಸುದೀಪ್‌ ಅವರಿಗೆ ಪಕ್ಷಕ್ಕೆ ಆಹ್ವಾನಿಸಿ ಕಾಂಗ್ರೆಸ್‌ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿರುವುದಾಗಿ ವರದಿಯಾಗಿದೆ. 

Advertisement

ಚುನಾವಣಾ ರಣ ಕಣದಲ್ಲಿ ಕಾವು ಏರುತ್ತಿದ್ದಂತೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಬಲ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸುದೀಪ್‌ ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next