Advertisement

ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ

07:31 PM Jul 05, 2022 | Team Udayavani |

ಚಾಮರಾಜನಗರ: ನಗರದ ಶ್ರೀಭ್ರಮರಾಂಬ  ಚಿತ್ರಮಂದಿರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳೊಂದಿಗೆ ಬೈರಾಗಿ ಚಿತ್ರ ವೀಕ್ಷಿಸಿದರು.

Advertisement

ನಟ ಶಿವರಾಜ್ ಕುಮಾರ್  ಹಾಗೂ ಚಿತ್ರ ಪ್ರದರ್ಶನ ಯಾತ್ರೆ  ನಗರದ ಭ್ರಮರಾಂಬ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ  ಚಿತ್ರ ಮಂದಿರದ ಮಾಲೀಕರು, ಅಭಿಮಾನಿಗಳು ಉದ್ದನೆಯ ಸರಪಟಾಕಿ ಸಿಡಿಸಿ,  ಶಿವಣ್ಣನಿಗೆ ಜೈಕಾರ ಹಾಕಿದರು.

ಶಿವರಾಜ್‌ ಕುಮಾರ್  ಅಭಿಮಾನಿಗಳು, ಪೇಕ್ಷಕರೊಂದಿಗೆ ಬೈರಾಗಿ ಚಿತ್ರವನ್ನು ಭ್ರಮರಾಂಭ ಚಿತ್ರದ ವಿಐಪಿ ಬಾಲ್ಕಾನಿಯಲ್ಲಿ  20 ನಿಮಿಷ ಕಾಲ ವೀಕ್ಷಿಸಿ ಖುಷಿಪಟ್ಟರು. ಜತೆಯಲ್ಲಿ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಸಾಥ್ ನೀಡಿದರು.

ಶಿವಣ್ಣ ಆಗಮನ ಖುಷಿ ತಂದಿದೆ : ಚಿತ್ರಮಂದಿರದ ಮಾಲೀಕರಾದ ರೇವಂತ್ ದೇವರು ಮಾತನಾಡಿ, ಶಿವಣ್ಣ ಹಾಗೂ ಅವರ ಕುಟುಂಬದವರು ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಶಿವಣ್ಣ ಅವರು ನಮ್ಮ ಕರೆಗೆ ಒಗೊಟ್ಟು  ನಮ್ಮ ಚಿತ್ರಮಂದಿರಕ್ಕೆ ಬಂದಿದ್ದಾರೆ. ಈ ಚಿತ್ರ ಶತಮನೋತ್ಸವ ಆಚರಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ  ಚಿತ್ರ ಮಂದಿರದ ಮಾಲೀಕರಾದ ಆರ್.ಶಿವಬಸವಸ್ವಾಮಿ,  ಆರ್.ಸುಂದರೇಶ್ ಮೂರ್ತಿ, ರೇವಂತ್ ದೇವರು, ರಕ್ಷಿತ್ ಮಾಂಬಳ್ಳಿ ಹಾಗೂ ಅಭಿಮಾನಿ  ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next