Advertisement

ಪರಿಶ್ರಮಕ್ಕೆ ಸಂದ ಪ್ರತಿಫಲ…ನಾಯಕನ ಪಟ್ಟ ಅಲಂಕರಿಸಿದ ಕುರಿ ಪ್ರತಾಪ್  

04:27 PM Feb 17, 2021 | Team Udayavani |

ಪ್ರತಿವಾರ ಕಿರುತೆರೆಯ ‘ಮಜಾ ಟಾಕೀಸ್’ ನಲ್ಲಿ ಕಾಣಿಸಿಕೊಂಡು, ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಗಿಸುವ ಹಾಸ್ಯ ನಟ ಕುರಿ ಪ್ರತಾಪ್ ಅವರಿಗೆ ಈಗ ಹೀರೋ ಆಗುವ ಸುದಿನ ಬಂದಿದೆ. ಈ ಹಾಸ್ಯ ನಟ ಚಿತ್ರವೊಂದಕ್ಕೆ ನಾಯಕನಾಗುತ್ತಿದ್ದಾರೆ.

Advertisement

ಈಗಾಗಲೇ ಹಿರಿತೆರೆಯ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿರುವ ಕುರಿ ಪ್ರತಾಪ್, ಈಗ ಚಿತ್ರವೊಂದಕ್ಕೆ ತಾವೇ ನಾಯಕ ನಟರಾಗಿದ್ದಾರೆ. ಈ ಚಿತ್ರಕ್ಕೆ ‘ಆರ್ ಸಿ ಬ್ರದರ್ಸ್’ ಎಂದು ನಾಮಕರಣ ಮಾಡಲಾಗಿದೆ. ಪ್ರಕಾಶ್ ಕುಮಾರ್ ಈ ಚಿತ್ರದ ನಿರ್ದೇಶಕರು. ಇದು ಚಿತ್ರರಂಗದಲ್ಲಿ ಸಾಕಷ್ಟು ಬೆವರು ಸುರಿಸಿರುವ ಕುರಿ ಪ್ರತಾಪ್ ಅವರಿಗೆ ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರ.

‘ಆರ್ ಸಿ ಬ್ರದರ್ಸ್’ ಚಿತ್ರದಲ್ಲಿ ಕುರಿ ಪ್ರತಾಪ್ ಅವರ ಹಿರಿಯ ಸಹೋದರನ ಪಾತ್ರದಲ್ಲಿ ತಬಲಾ ನಾಣಿ ನಟಿಸಲಿದ್ದಾರೆ. ಇಲ್ಲಿ ತಬಲಾ ನಾಣಿಯವರದೂ ಕೂಡ ಮಹತ್ವದ ಪಾತ್ರ. ಅಣ್ಣ-ತಮ್ಮಂದಿರ ಬಾಂಧವ್ಯದ ಕುರಿತು ಕಥಾ ಹಂದರ ಹೊಂದಿರುವ ಈ ಸಿನಿಮಾ ಬರುವ ಮಾರ್ಚ್ ತಿಂಗಳಿನಲ್ಲಿ ಸೆಟ್ಟೇರಲಿದೆ.

ಈಗಾಗಲೇ ಕಾಮಿಡಿ ನಟರಾಗಿ ಜನಪ್ರಿಯಗೊಂಡು ಹೀರೋ ಪಟ್ಟ ಅಲಂಕರಿಸಿದ ಸಾಕಷ್ಟು ನಟರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಇದೀಗ ಇವರ ಸಾಲಿಗೆ ಕುರಿ ಪ್ರತಾಪ್ ಹೊಸ ಸೇರ್ಪಡೆ.

ಇನ್ನು ತಾವು ನಾಯಕ ನಟನಾಗಿ ಬಡ್ತಿ ಪಡೆದುಕೊಳ್ಳುತ್ತಿರುವ ಬಗ್ಗೆ ಮಾತಾಡಿರುವ ಕುರಿ ಪ್ರತಾಪ್. ಇದು ನಂಗೆ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ. ಸಾಮಾನ್ಯವಾಗಿ ಪೋಷಕ ಪಾತ್ರದಿಂದ ನಾಯಕ ಪಾತ್ರಕ್ಕೆ ಪ್ರಮೋಷನ್ ಪಡೆದ ನಟರು ಮತ್ತೆ ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸಲು ಹಿಂದೇಟು ಹಾಕುವುದುಂಟು. ಆದರೆ, ನಾನು ಅವರ ಸಾಲಿಗೆ ಸೇರುವುದಿಲ್ಲ. ಈ ಸಿನಿಮಾ ನಂತರವೂ ನಾನು ಪೋಷಕ ಪಾತ್ರಗಳಲ್ಲಿ ನಟಿಸುತ್ತೇನೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next