Advertisement

ಆಯುಕ್ತರ ಭೇಟಿಯಾದ ನಟ ಅರ್ಜುನ್‌ ಸರ್ಜಾ

06:40 AM Jan 22, 2019 | |

ಬೆಂಗಳೂರು: ಮಿ ಟೂ ಪ್ರಕರಣ ಸಂಬಂಧ ನಟ ಅರ್ಜುನ್‌ ಸರ್ಜಾ ಸೋಮವಾರ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ರನ್ನು ಸೋಮವಾರ ಭೇಟಿ ಮಾಡಿದ್ದಾರೆ. ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ತೆರಳಿ, ಆಯುಕ್ತರೊಂದಿಗೆ ಕೆಲಕಾಲ ಮಾತುಕತೆ ನಡೆಸಿರುವ ಸರ್ಜಾ, ಪ್ರಕರಣದ ತನಿಖೆ ಕುರಿತು ಮಾಹಿತಿ ಪಡೆಯಲು ಆಯುಕ್ತರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.

Advertisement

ಇದೇ ವೇಳೆ ನಟಿ ಶೃತಿ ಹರಿಯನ್‌ ಮಾಡಿದ ಮಿ ಟೂ ಆರೋಪ ಕುರಿತು ಪ್ರತಿಕ್ರಿಯಿಸಲು ಅರ್ಜುನ್‌ ಸರ್ಜಾ ನಿರಾಕರಿಸಿದರು. ಈ ಹಿಂದೆ ಸರ್ಜಾ ಅವರ ಮ್ಯಾನೇಜರ್‌ ಶಿವಾರ್ಜುನ್‌, ಮಿ ಟೂ ಆರೋಪ ಸಂಬಂಧ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next