Advertisement

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ

12:25 PM Dec 22, 2019 | Team Udayavani |

ಗದಗ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಇಲ್ಲಿನ ನಗರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಫೋನ್ ಇನ್‌ ಕಾರ್ಯಕ್ರಮ ನಡೆಯಿತು.

Advertisement

ಜಿಪಂ ಸಿಇಒ ಡಾ| ಆನಂದ ಕೆ. ಅವರು ಮಕ್ಕಳ ಕರೆಗಳನ್ನು ಸ್ವೀಕರಿಸಿ, ಇಂಗ್ಲಿಷ್‌ ವಿಷಯದಲ್ಲಿ ಕಲಿಕಾ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕ್ರಮ ಸೂಚಿಸಿದರು. ನಿರಂತರ ಅಭ್ಯಾಸದೊಂದಿಗೆ ಕಠಿಣ ಎನಿಸುವ ವಿಷಯಗಳ ಕುರಿತು ಪಟ್ಟಿ ಮಾಡಿ, ಅವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಫೋನ್ ಮೂಲಕ ವಿದ್ಯಾರ್ಥಿಗಳು ಕೇಳಿದ 124 ಪ್ರಶ್ನೆಗಳಿಗೆ 8 ಜನ ಇಂಗ್ಲಿಷ್‌ ವಿಷಯ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಅಭ್ಯಾಸ ಮಾಡುವ ವಿಧಾನ, ವ್ಯಾಕರಣ, ನಿಬಂಧನೆ, ಪತ್ರ ಲೇಖನ ವಿಧಾನಹಾಗೂ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಚ್‌. ನಾಗೂರ, ಗದಗ ಶಹರ ಬಿಇಒ ಎಸ್‌.ಎಸ್‌. ಕೆಳದಿಮಠ, ಬಿಆರ್‌ಪಿ ಮುಳಗುಂದ ಮಠ, ಗದಗ ಶಹರ ಮತ್ತು ನೋಡಲ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next